ADVERTISEMENT

ಜಿನ್ನಾ ಕಲ್ಪನೆಗೆ ಜಯವಾಗುತ್ತಿದೆ: ಸಿಎಎ ಬಗ್ಗೆ ಶಶಿ ತರೂರ್ ಅಭಿಪ್ರಾಯ

ಪಿಟಿಐ
Published 27 ಜನವರಿ 2020, 5:49 IST
Last Updated 27 ಜನವರಿ 2020, 5:49 IST
   

ಜೈಪುರ:ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಜಾರಿಗೆ ಕಾರಣವಾಗುವುದಾದರೆ ಅದು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾಗೆ ಗೆಲುವಾದಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು,‘ಸಿಎಎ ಜಾರಿಯೊಂದಿಗೆ ದೇಶದಲ್ಲಿ ಜಿನ್ನಾ ಅವರ ಕಲ್ಪನೆ ಸಾಕಾರಗೊಳ್ಳುತ್ತಿದೆ. ಜಿನ್ನಾ ಸಂಪೂರ್ಣ ಜಯಗಳಿಸಿದ್ದಾರೆ ಎಂದು ನಾನು ಹೇಳಲಾರೆ.ಆದರೆ, ಅವರ ಕಲ್ಪನೆಗೆ ಗೆಲುವಾಗುತ್ತಿದೆ. ದೇಶದಲ್ಲಿ ಇನ್ನೂ ಆಯ್ಕೆಗಳಿವೆ. ಅವುಗಳೆಂದರೆ, ಜಿನ್ನಾರ ರಾಷ್ಟ್ರೀಯ ಪರಿಕಲ್ಪನೆ ಮತ್ತು ಗಾಂಧೀಜಿ ಅವರ ರಾಷ್ಟ್ರೀಯ ಪರಿಕಲ್ಪನೆ’ ಎಂದು ಹೇಳಿದ್ದಾರೆ.

‘ಟೆನಿಸ್ ಆಟದ ಮಾದರಿಯಲ್ಲಿ ವಿಶ್ಲೇಷಿಸುವುದಾದರೆ, ಜಿನ್ನಾ ಪರಿಕಲ್ಪನೆಗೆ ಈಗ ಒಂದು ಸೆಟ್ ಅಥವಾ ಮೊದಲ ಸೆಟ್ ಮುನ್ನಡೆ ದೊರಕಿದೆ ಎನ್ನಬಹುದು. ಸಿಎಎ ಜಾರಿಯುಎನ್‌ಪಿಆರ್ ಮತ್ತು ಎನ್‌ಆರ್‌ಸಿ ಜಾರಿಗೆ ಕಾರಣವಾದರೆ ಅದು ಮುಂದಿನ ಹಂತವಾಗಿರಲಿದೆ. ಇದು ನಿಜವಾಗಿದ್ದೇ ಆದಲ್ಲಿ ಜಿನ್ನಾಪರಿಕಲ್ಪನೆಗೆ ಪೂರ್ತಿ ಗೆಲುವು ಸಿಕ್ಕಿದಂತೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.