ADVERTISEMENT

ಯೋಧರಿಗೆ ಅವಿಶ್ರಾಂತ ದುಡಿಮೆ: ಕಳವಳ

ಪಿಟಿಐ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಮೀಸಲು ಪೊಲೀಸ್‌ ಪಡೆಯ ಯೋಧರನ್ನು (ಸಿಆರ್‌ಪಿಎಫ್‌) ದೀರ್ಘಾವಧಿ ಕೆಲಸಕ್ಕೆ ನಿಯೋಜಿಸುತ್ತಿರುವುದಕ್ಕೆ ಜಂಟಿ ಸಂಸದೀಯ ಸಮಿತಿ ಆತಂಕ ವ್ಯಕ್ತಪಡಿಸಿದೆ. ವಾರದ ರಜೆ ಮತ್ತು ಇತರ ರಜೆಗಳನ್ನು ಅವರಿಗೆ ನೀಡದೇ ಇರುವುದು ಆರೋಗ್ಯ
ಕರವಲ್ಲ ಮತ್ತು ಸಮರ್ಥನೀಯವೂ ಅಲ್ಲ ಎಂದು ಹೇಳಿದೆ.

ಸಿಬ್ಬಂದಿಗೆ ಅತ್ಯಗತ್ಯವಾದ ವಿಶ್ರಾಂತಿ ನೀಡಲು ಮತ್ತು ಅವರ ಕರ್ತವ್ಯದ ಅವಧಿಯನ್ನು ಸಹ್ಯವಾಗಿಸಲು ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT