ADVERTISEMENT

ಹಿಮಾಚಲ ಪ್ರದೇಶದ ಬಿಜೆಪಿ ನಾಯಕತ್ವಕ್ಕೆ ಕಂಗನಾ ತೊಡಕಾಗಿದ್ದಾರೆ: ವಿಕ್ರಮಾದಿತ್ಯ

ಪಿಟಿಐ
Published 14 ಏಪ್ರಿಲ್ 2024, 13:48 IST
Last Updated 14 ಏಪ್ರಿಲ್ 2024, 13:48 IST
ವಿಕ್ರಮಾದಿತ್ಯ ಸಿಂಗ್‌
ವಿಕ್ರಮಾದಿತ್ಯ ಸಿಂಗ್‌   

ಶಿಮ್ಲಾ: ನಟಿ ಕಂಗನಾ ರನೌತ್‌ ಅವರ ರಾಜಕೀಯ ಪ್ರವೇಶದಿಂದ ಹಿಮಾಚಲ ಪ್ರದೇಶದ ಬಿಜೆಪಿ ನಾಯಕರ ಭವಿಷ್ಯದ ನಿರೀಕ್ಷೆಗಳಿಗೆ ತೊಂದರೆ ಉಂಟಾಗಲಿದೆ ಎಂದು ಲೋಕೋಪಯೋಗಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್‌ ಹೇಳಿದ್ದಾರೆ.

ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ಅವರನ್ನು ಪಕ್ಷ ಘೋಷಿಸಿದೆ. ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ನಟಿಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಕಳೆದ ವಾರ ಮನಾಲಿಯಲ್ಲಿ ಕಂಗನಾ ಮಾಡಿದ ಭಾಷಣವು, ರಾಜ್ಯ ಬಿಜೆಪಿ ನಾಯಕರು ಹಮೀರ್‌ಪುರನಲ್ಲಿ ನಡೆಸಿದ ಚುನಾವಣಾ ರ್‍ಯಾಲಿಯನ್ನು ಮಂಕಾಗಿಸಿದೆ. ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ನಾಯಕರನ್ನು ಮಂಕಾಗಿಸಿರುವ ಕಂಗನಾ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಭಯಗೊಂಡಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ವಿಕ್ರಮಾದಿತ್ಯ ಸಿಂಗ್‌ ಸೇರಿದಂತೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಕೆಲವು ಕುಟುಂಬಗಳ ವಿರುದ್ಧ ಕಂಗನಾ ವಾಗ್ದಾಳಿ ನಡೆಸಿದ್ದರು.

ಹಿಮಾಚಲ ಪ್ರದೇಶದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.