ಲಖನೌ: ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಬೇಕಾದರೆ ಭಕ್ತರು ವಸ್ತ್ರಸಂಹಿತೆ ಅನುಸರಿಸುವುದು ಕಡ್ಡಾಯವಾಗಲಿದೆದೆ. ಹಿರಿಯ ವಿದ್ವಾಂಸರ ಸಲಹೆಯನ್ನು ಆಧರಿಸಿ ದೇವಾಲಯದ ಆಡಳಿತ ಮಂಡಳಿಯು ಈ ನೂತನ ನಿಯಮವನ್ನು ಜಾರಿಗೆ ತರಲು ಚರ್ಚೆ ನಡೆಸಲಾಗಿದೆ.
ಆದರೆ ಕಡ್ಡಾಯಗೊಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಬೇಕಾದರೆ ಪುರುಷರು ಕುರ್ತ– ಧೋತಿ ಮತ್ತು ಮಹಿಳೆಯರು ಸೀರೆ ಧರಿಸುವುದು.ವಿಭಿನ್ನ ಉಡುಪುಗಳನ್ನು ಧರಿಸಿದವರು ದೇವಾಲಯದ ಅಂಗಳದವರೆಗೆ ಪ್ರವೇಶಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.