ADVERTISEMENT

ಈ ದಿನಾಂಕದಿಂದ ಭಕ್ತಾದಿಗಳಿಗೆ ಕೇದಾರನಾಥ, ಬದ್ರಿನಾಥ ಯಾತ್ರಾ ಸ್ಥಳಗಳು ಪುನಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2025, 11:50 IST
Last Updated 19 ಏಪ್ರಿಲ್ 2025, 11:50 IST
<div class="paragraphs"><p>ಕೇದಾರನಾಥ&nbsp;</p></div>

ಕೇದಾರನಾಥ 

   

– ಪಿಟಿಐ

ಬೆಂಗಳೂರು: ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಕೇದಾರನಾಥ್ ಹಾಗೂ ಬದ್ರಿನಾಥ್ ಧಾಮಗಳು ಯಾತ್ರಿಕರಿಗಾಗಿ ಪುನಃ ತೆರೆಯಲಾಗುತ್ತಿದೆ.

ADVERTISEMENT

ಮೇ 2 ರಂದು ಕೇದಾರನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ. ಮೇ 4 ರಂದು ಬದ್ರಿನಾಥ್ ಧಾಮ ಭಕ್ತಾದಿಗಳಿಗೆ ತೆರೆಯಲಿದೆ ಎಂದು ಶ್ರೀ ಬದ್ರಿನಾಥ್ ಕೇದಾರನಾಥ್ ದೇವಸ್ಥಾನ ಸಮಿತಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಹವಾಮಾನ ವೈಪರಿತ್ಯದಿಂದ ಭಕ್ತಾದಿಗಳಿಗೆ ತೊಂದರೆ ಆಗಬಾರದೆಂದು ಈ ಧಾಮಗಳನ್ನು ನವೆಂಬರ್‌ನಿಂದ ಏಪ್ರಿಲ್‌ವರೆಗೆ ಮುಚ್ಚಲಾಗಿರುತ್ತದೆ.

ಚಾರ್‌ಧಾಮ ಯಾತ್ರೆ ಎಂದು ಪ್ರಸಿದ್ಧವಾಗಿರುವ ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ, ಯಮನೋತ್ರಿ ಯಾತ್ರೆಗಳು ಉತ್ತರ ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.