ADVERTISEMENT

ಐಎಎಸ್ ಅಧಿಕಾರಿಗಳ ನಿಯೋಜನೆ: ಪ್ರಸ್ತಾವಿತ ತಿದ್ದುಪಡಿ ವಿರೋಧಿಸಿದ ಕೇರಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2022, 16:36 IST
Last Updated 23 ಜನವರಿ 2022, 16:36 IST
ಕೇರಳ ಸಿಎಂ ಪಿಣರಾಯಿ ವಿಜಯನ್
ಕೇರಳ ಸಿಎಂ ಪಿಣರಾಯಿ ವಿಜಯನ್   

ಬೆಂಗಳೂರು: ಅಖಿಲ ಭಾರತ ಸೇವೆಯಲ್ಲಿನ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವಿತ ಹೊಸ ತಿದ್ದುಪಡಿಯನ್ನು ಕೈಬಿಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.

ಹೊಸ ಪ್ರಸ್ತಾವಿತ ತಿದ್ದುಪಡಿಯಿಂದ ಐಎಎಸ್ ಸೇರಬಯಸುವ ಮತ್ತು ಈಗಾಗಲೇ ಸೇವೆಯಲ್ಲಿರುವ ಅಧಿಕಾರಿಗಳಲ್ಲಿ ಭಯ ಉಂಟಾಗಲಿದೆ. ಅಲ್ಲದೆ, ಐಎಎಸ್ ಸೇರ ಬಯಸುವವರು ಕೂಡ ಹಿಂಜರಿಯುವಂತಾಗಿದೆ ಎಂದು ವಿಜಯನ್ ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದ ಕೇಂದ್ರದ ನಿಯಮದಲ್ಲಿ ಕೂಡ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವಿದೆ. ಹೀಗಾಗಿ ಮತ್ತೊಂದು ತಿದ್ದುಪಡಿ ಅಗತ್ಯವಿಲ್ಲ ಎಂದು ವಿಜಯನ್ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಅಖಿಲ ಭಾರತ ಸೇವೆಯಲ್ಲಿನ ಅಧಿಕಾರಿಗಳನ್ನು ರಾಜ್ಯಗಳಿಗೆ ನಿಯೋಜಿಸುವುದು ಮತ್ತು ಮರಳಿ ಕೇಂದ್ರ ಸೇವೆಗೆ ಕಳುಹಿಸುವ ಕುರಿತಂತೆ ರಾಜ್ಯಗಳ ಅಧಿಕಾರವನ್ನು ಹೊಸ ತಿದ್ದುಪಡಿ ಕಡಿತಗೊಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.