ADVERTISEMENT

ಕೇರಳದಲ್ಲಿನ್ನು ದಿಢೀರ್‌ ಹರತಾಳ ನಡೆಸುವಂತಿಲ್ಲ: ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:14 IST
Last Updated 7 ಜನವರಿ 2019, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ರಾಜ್ಯದಲ್ಲಿ ದಿಢೀರ್‌ ಹರತಾಳ ನಡೆಸುವುದನ್ನು ನಿಷೇಧಿಸಿ ಕೇರಳ ಹೈಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.

ಇನ್ನುಮುಂದೆ ಯಾವುದೇ ಸಂಘಟನೆಗಳು ಮತ್ತು ಪಕ್ಷಗಳು ಹರತಾಳಕ್ಕೆ ದಿಢೀರ್‌ ಕರೆ ನೀಡುವಂತಿಲ್ಲ. ಒಂದು ವೇಳೆ ಹರತಾಳ ನಡೆಸುವುದಾದರೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಆದೇಶದಲ್ಲಿ ಹೇಳಿದೆ.

ಶಬರಿಮಲೆ ದೇಗುಲವನ್ನು ಮಹಿಳೆಯರು ಪ್ರವೇಶಿಸಿದ್ದ ಕಾರಣಕ್ಕೆ ಸರಣಿ ಹರತಾಳಕ್ಕೆ ಸಾಕ್ಷಿಯಾಗಿದ್ದ ಕೇರಳ ರಾಜ್ಯವು ಹೈಕೋರ್ಟ್‌ ಆದೇಶದಿಂದ ನಿರಾಳಗೊಂಡಿದೆ. 2018ರಲ್ಲಿ ನಡೆದ ದಿಢೀರ್‌ ಹರತಾಳಗಳಿಂದ 97 ಕೆಲಸದ ದಿನಗಳು ನಷ್ಟವಾಗಿವೆ. ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಇದರಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಹಾಗಾಗಿ ರಾಜ್ಯದಲ್ಲಿ ದಿಢೀರ್‌ ಹರತಾಳ ನಿಷೇಧಿಸಬೇಕು ಎಂದು ಕೇರಳದ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ ಪರಿಗಣಿಸಿದ್ದು, ಈ ಆದೇಶ ಹೊರಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.