ತಿರುವನಂತಪುರ: ಕೇರಳದಲ್ಲಿ ದಿನೆದಿನೇ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಶನಿವಾರ ಹೊಸದಾಗಿ 26,000 ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದಿರುವ ಮುಖ್ಯಮಂತ್ರಿ ಪಿಣಯಾಯಿ ವಿಜಯನ್, ಕೋವಿಡ್ ಪಿಡುಗನ್ನು ಜ್ವಾಲಾಮುಖಿಗೆ ಹೋಲಿಸಿದ್ದಾರೆ.
‘ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳಲಿರುವ ಜ್ವಾಲಾಮುಖಿ ಮೇಲೆ ನಾವೀಗ ಕುಳಿತುಕೊಂಡಂತಿದೆ. ಪರಿಸ್ಥಿತಿಯನ್ನು ಜನರ ಅರ್ಥ ಮಾಡಿಕೊಂಡು, ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.