ADVERTISEMENT

ಪತ್ತೆಯಾಗದ ರಾಜೀವ್‌: ದೆಹಲಿಗೆ ಮರಳಿದ ಸಿಬಿಐ ತಂಡ

ಪಿಟಿಐ
Published 27 ಸೆಪ್ಟೆಂಬರ್ 2019, 17:54 IST
Last Updated 27 ಸೆಪ್ಟೆಂಬರ್ 2019, 17:54 IST

ಕೋಲ್ಕತ್ತ :ಬಹುಕೋಟಿ ಶಾರದಾ ಚಿಟ್‌ ಫಂಡ್‌ ಪ್ರಕರಣಕ್ಕೆ ಸಂಬಂಧಿಸದಂತೆ, ತಲೆಮರೆಸಿಕೊಂಡಿರುವ ಮಾಜಿ ಐಪಿಎಸ್‌ ಅಧಿಕಾರಿ ರಾಜೀವ್‌ಕುಮಾರ್‌ ಅವರ ಪತ್ತೆಗೆ ಕಳುಹಿಸಿದ್ದ ಸಿಬಿಐ ವಿಶೇಷ ತಂಡ ದೆಹಲಿಗೆ ವಾಪಸಾಗಿದೆ.

ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್‌ ಕಳುಹಿಸಿದರೂ, ರಾಜೀವ್‌ ಕುಮಾರ್‌ ಪ್ರತಿಕ್ರಿಯಿಸದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿತ್ತು.

ಸೆ.17 ರಂದು ಕೋಲ್ಕತ್ತಗೆ ತೆರಳಿದ್ದ ವಿಶೇಷತಂಡ ನಗರ ಮತ್ತು ಸುತ್ತಮುತ್ತಲಿನ ಹಲವು ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿತು. ಆದರೆ, ರಾಜೀವ್‌ಕುಮಾರ್‌ ಅವರನ್ನು ಪತ್ತೆ ಹಚ್ಚಲು ವಿಫಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.