ADVERTISEMENT

ಉತ್ತರ ಪ್ರದೇಶ: ಭಾರಿ ಮಳೆ, ಸಿಡಿಲಿನಿಂದ 24 ಮಂದಿ ಸಾವು

ಏಜೆನ್ಸೀಸ್
Published 26 ಜೂನ್ 2020, 4:06 IST
Last Updated 26 ಜೂನ್ 2020, 4:06 IST
ಮಳೆ ಸುರಿಯುತ್ತಿದ್ದ ವೇಳೆ ಲಖನೌ ರಸ್ತೆಯಲ್ಲಿ ಕುದುರೆ ಗಾಡಿಗಳು ಸಾಗುತ್ತಿರುವುದು. ಪಿಟಿಐ/ ನಂದಕುಮಾರ್ ಚಿತ್ರ
ಮಳೆ ಸುರಿಯುತ್ತಿದ್ದ ವೇಳೆ ಲಖನೌ ರಸ್ತೆಯಲ್ಲಿ ಕುದುರೆ ಗಾಡಿಗಳು ಸಾಗುತ್ತಿರುವುದು. ಪಿಟಿಐ/ ನಂದಕುಮಾರ್ ಚಿತ್ರ   

ಲಖನೌ:ಮಳೆ ಹಾಗೂ ಸಿಡಿಲಿನಿಂದಾಗಿ ಉತ್ತರ ಪ್ರದೇಶದಲ್ಲಿ ಗುರುವಾರ ಒಂದೇ ದಿನ 24 ಮಂದಿ ಮೃತಪಟ್ಟಿದ್ದು,12 ಜನರು ಗಾಯಗೊಂಡಿದ್ದಾರೆ.ಡಿಯೋರಿಯಾ ಜಿಲ್ಲೆಯೊಂದರಲ್ಲೇ 9 ಜನರು ಸಾವಿಗೀಡಾಗಿರುವುದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪರಿಹಾರ ಆಯುಕ್ತ ಸಂಜಯ್ ಗೋಯಲ್‌, ‘ಮಳೆ ಹಾಗೂ ಸಿಡಿಲಿನಿಂದಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಗುರುವಾರ ಒಟ್ಟು 24 ಜನರು ಮೃತಪಟ್ಟಿದ್ದಾರೆ. ಫತೇಪುರ್, ಬಲರಾಮ್‌ಪುರ, ಉನ್ನಾವೊ ಹಾಗೂ ಕುಶಿನಗರ್‌ ಜಿಲ್ಲೆಗಳಲ್ಲಿ ತಲಾ 1,ಡಿಯೋರಿಯಾ ಜಿಲ್ಲೆಯಲ್ಲಿ 9, ಬಾರಾಬಂಕಿ ಜಿಲ್ಲೆಯಲ್ಲಿ 2, ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ 6, ಅಂಬೇಡ್ಕರ್‌ ನಗರ ಜಿಲ್ಲೆಯಲ್ಲಿ 3 ಮಂದಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ಬಿಹಾರದ ಎಂಟು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌
ಬಿಹಾರದಲ್ಲಿಗುರುವಾರ ಒಂದೇ ದಿನ ಸಿಡಿಲು ಬಡಿದು 83 ಜನರು ಮೃತಪಟ್ಟಿದ್ದರು. ಇಲ್ಲಿನ ಸಿವಾನ್‌, ಗೋಪಾಲ್‌ಗಂಜ್‌, ಸೀತಾಮರ್ಹಿ, ದರ್ಭಂಗಾ, ಸುಪಾಲ್‌, ಅರಾರಿಯಾ, ಕಿಶಾನ್‌ಗಂಜ್‌, ಕತಿಹಾರ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ADVERTISEMENT

ಬಿಹಾರದಲ್ಲಿಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಲಾ ₹4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ‘ಭಾರೀ ಮಳೆ ಮತ್ತು ಮಿಂಚಿನಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಪ್ರಾಣಹಾನಿ ಸಂಭವಿಸಿರುವ ಸುದ್ದಿ ತಿಳಿದು ದುಃಖವಾಯಿತು. ಆಡಳಿತವು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪ’ ಎಂದುರಾಮನಾಥ ಬರೆದುಕೊಂಡಿದ್ದಾರೆ.

‘ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಿಡಿಲು ಮತ್ತು ಮಳೆಗೆ ಹಲವು ಜೀವಗಳು ಬಲಿಯಾದ ದುರಂತಮಯ ಸುದ್ದಿ ತಿಳಿಯಿತು. ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಪ್ರಧಾನಿ ಮೋದಿ ಹೇಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.