ADVERTISEMENT

ಪಾಕ್‌ ಗುಂಡಿನ ದಾಳಿ: ಯೋಧ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:00 IST
Last Updated 20 ಆಗಸ್ಟ್ 2019, 20:00 IST
   

ಜಮ್ಮು : ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದ್ದು,ಮಂಗಳವಾರವೂ ಗುಂಡಿನ ದಾಳಿ ಮುಂದುವರಿಸಿದೆ.

ಪೂಂಛ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಯೋಧರೊಬ್ಬರು ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧ ನಾಯಕ್‌ ರವಿ ರಂಜನ್‌ ಕುಮಾರ್‌ ಸಿಂಗ್‌ (36)ಬಿಹಾರದ ಗೋಪಿ ಬಿಘ ಗ್ರಾಮದವರು.

ಮೆಂದರ್‌ ಮತ್ತು ಕೃಷ್ಣಘಾಟಿ ವಿಭಾಗದಲ್ಲೂನಾಗರಿಕರು ಮತ್ತು ಸೇನೆಯ ಗಡಿ ಠಾಣೆಗಳನ್ನುಗುರಿಯಾಗಿಸಿ ಪಾಕ್‌ ದಾಳಿ ನಡೆಸಿದೆ. ಭಾರತದ ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.