ADVERTISEMENT

ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ಸಂಪರ್ಕದಲ್ಲಿ: ನಾರಾಯಣ ರಾಣೆ

ಪಿಟಿಐ
Published 22 ಅಕ್ಟೋಬರ್ 2022, 15:24 IST
Last Updated 22 ಅಕ್ಟೋಬರ್ 2022, 15:24 IST
ಉದ್ಧವ್ ಠಾಕ್ರೆ ಹಾಗೂ ಏಕನಾಥ ಶಿಂದೆ
ಉದ್ಧವ್ ಠಾಕ್ರೆ ಹಾಗೂ ಏಕನಾಥ ಶಿಂದೆ   

‍ಪುಣೆ: ಶಿವಸೇನಾದ ಉದ್ದವ್‌ ಠಾಕ್ರೆ ಬಣದ ನಾಲ್ವರು ಶಾಸಕರುಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣ ಸೇರಲು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದರು. ಆದರೆ, ಶಾಸಕರ ಹೆಸರುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ರೋಜಗಾರ್‌ ಮೇಳದಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ನೀಡಿರುವ ಅವರು, 56 ಶಾಸಕರ ಪೈಕಿ ಠಾಕ್ರೆ ಬಣದಲ್ಲಿ ಏಳು ಶಾಸಕರು ಇದ್ದಾರೆ. ಅವರು ಸಹ ಹೊರ ಬರಲು ನಿರ್ಧರಿಸಿದ್ದಾರೆ. ನಾಲ್ವರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ರಾಣೆ ಹೇಳಿದರು.

ಠಾಕ್ರೆಅವರನ್ನು ಲೇವಡಿ ಮಾಡಿದ ರಾಣೆ, ’ಅವರ ರಾಜಕೀಯ ಮಾತೋಶ್ರೀಗೆ (ಮುಂಬೈನ ಬಾಂದ್ರಾದಲ್ಲಿರುವ ಠಾಕ್ರೆ ಖಾಸಗಿ ನಿವಾಸ) ಸೀಮಿತವಾಗಿದೆ. ಸೇನೆಯಲ್ಲಿ ಯಾವುದೇ ಬಣ ಉಳಿದಿಲ್ಲ ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.