ADVERTISEMENT

ಮಹಾರಾಷ್ಟ್ರ | ತುರ್ತು ಪರಿಸ್ಥಿತಿ: ಜೈಲು ಸೇರಿದ್ದವರ ಗೌರವಧನ ಹೆಚ್ಚಳಕ್ಕೆ ಸಮ್ಮತಿ

ಪಿಟಿಐ
Published 17 ಜೂನ್ 2025, 13:29 IST
Last Updated 17 ಜೂನ್ 2025, 13:29 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಜೈಲು ಸೇರಿದ್ದ ವ್ಯಕ್ತಿಗಳಿಗೆ ನೀಡಲಾಗುವ ಗೌರವಧನವನ್ನು ದುಪ್ಪಟ್ಟುಗೊಳಿಸುವ ನಿರ್ಧಾರಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಮಂಗಳವಾರ ಅನುಮತಿ ನೀಡಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ಗೌರವ ಯೋಜನಾ’ದಲ್ಲಿನ ಬದಲಾವಣೆಗಳಿಗೆ ಅನುಮತಿ ದೊರೆತಿದೆ. ಜೈಲು ಸೇರಿದ್ದ ವ್ಯಕ್ತಿಯ ಸಂಗಾತಿಯನ್ನೂ ಫಲಾನುಭವಿ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ(1975–1977) ಒಂದು ತಿಂಗಳು ಜೈಲಿನಲ್ಲಿದ್ದವರಿಗೆ ‘ಗೌರವ್‌ ಯೋಜನಾ’ದಡಿಯಲ್ಲಿ ಮಾಸಿಕ ₹5 ಸಾವಿರ ಗೌರವಧನ ನೀಡಲಾಗುತ್ತಿದೆ. ಅದಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದವರಿಗೆ ಮಾಸಿಕ ₹10 ಸಾವಿರ ನೀಡಲಾಗುತ್ತಿದೆ. ಇನ್ನು ಮುಂದೆ ಇದು ದ್ವಿಗುಣಗೊಳ್ಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.