ADVERTISEMENT

ಮಹಾರಾಷ್ಟ್ರ ಪರಿಷತ್‌ ಚುನಾವಣೆ: ಉದ್ಧವ್‌ ಠಾಕ್ರೆ ಸೇರಿ 9 ಮಂದಿ ಅವಿರೋಧ ಆಯ್ಕೆ

ಪಿಟಿಐ
Published 14 ಮೇ 2020, 20:26 IST
Last Updated 14 ಮೇ 2020, 20:26 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ    

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೇರಿದಂತೆ 9 ಮಂದಿ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿವಸೇನೆಯಿಂದ ಉದ್ಧವ್‌ ಠಾಕ್ರೆ, ವಿಧಾನ ಪರಿಷತ್ತಿನ ಉಪ ಸಭಾಪತಿ ನೀಲಂ ಗುರ್ಹೆ, ಬಿಜೆಪಿಯಿಂದರಂಜಿತ್‌ಸಿಂಹ ಮೋಹಿತೆ ಪಾಟೀಲ್‌, ಗೋಪಿಚಂದ್‌ ಪಡಾಲ್ಕರ್‌, ಪ್ರವೀಣ್‌ ದಾಟ್ಕೆ ಮತ್ತು ರಮೇಶ್‌ ಕರಾಡ್‌, ಎನ್‌ಸಿಪಿಯಿಂದಶಶಿಕಾಂತ್‌ ಶಿಂಧೆ, ಅಮೂಲ ಮಿಟ್ಕಾರಿ ಮತ್ತು ಕಾಂಗ್ರೆಸ್‌ ನಾಯಕ ರಾಜೇಶ್‌ ರಾಠೋಡ್‌‌ ಆಯ್ಕೆಯಾಗಿದ್ದಾರೆ.

ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಗುರುವಾರ ಮುಕ್ತಾಯವಾದ ಬಳಿಕ 9 ಸ್ಥಾನಗಳಿಗೆ ವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.