ADVERTISEMENT

ಮಹಾರಾಷ್ಟ್ರದ ಪೆಂಚ್ ಅಭಯಾರಣ್ಯದಲ್ಲಿ ಹುಲಿ ಸಾವು; ಬೇಟೆ ಆರೋಪದಲ್ಲಿ ನಾಲ್ವರ ಬಂಧನ

ಪಿಟಿಐ
Published 14 ಜನವರಿ 2023, 12:31 IST
Last Updated 14 ಜನವರಿ 2023, 12:31 IST
‌ಪ್ರಾತಿನಿಧಿಕ ಚಿತ್ರ
‌ಪ್ರಾತಿನಿಧಿಕ ಚಿತ್ರ   

ನಾಗ್ಪುರ: ಪೆಂಚ್‌ ಸಂರಕ್ಷಿತ ಅಭಯಾರಣ್ಯದಲ್ಲಿ ಹುಲಿ ಸಾವಿಗೆ ಕಾರಣವಾದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೀಸಲು ಅರಣ್ಯದ ಪಯೋನಿ ವಲಯದಲ್ಲಿ ಹುಲಿಯ ಮೃತದೇಹ ಜನವರಿ 12ರಂದು ಪತ್ತೆಯಾಗಿತ್ತು. ಹುಲಿಯನ್ನು ಭೇಟಿಯಾಡಿದ ಆರೋಪದಲ್ಲಿ ಅದೇ ದಿನ ಮೂವರನ್ನು ಬಂಧಿಸಲಾಗಿದೆ. ಶುಕ್ರವಾರ (ಜ.13) ಮತ್ತೊಬ್ಬನನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ಡಾ. ಪ್ರಭುನಾಥ್‌ ಶುಕ್ಲಾ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ತಿಳಿಸಿದ್ದಾರೆ.

ADVERTISEMENT

ಪೆಂಚ್‌ ಅಭಯಾರಣ್ಯವು ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿದೆ. ಸುಮಾರು 257 ಚದರ ಕಿಲೋಮೀಟರ್‌ನಷ್ಟು ವಿಶಾಲವಾಗಿ ಮಹಾರಾಷ್ಟ್ರದಲ್ಲಿಯೂ ಹರಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.