ADVERTISEMENT

ಮಮತಾ ಬ್ಯಾನರ್ಜಿ ದೇವರ ಸಮಾನ, ನಾವು ಅವರನ್ನು ಪೂಜಿಸುತ್ತೇವೆ: ಬಂಗಾಳ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2023, 4:07 IST
Last Updated 27 ಮಾರ್ಚ್ 2023, 4:07 IST
   

ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರು ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಕೃಷಿ ಸಚಿವ ಸೊಭಾನ್‌ದೇಬ್‌ ಚಟ್ಟೊಪಾಧ್ಯಾಯ ಹೇಳಿದ್ದಾರೆ.

ಭಾನುವಾರ 24 ಉತ್ತರ ಪರಗಣ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರನ್ನು ನಾವು ಪೂಜಿಸುತ್ತೇವೆ. ದೇವರಿಗೆ ಪೂಜೆ ಸಲ್ಲಿಸುವ ಪೂಜೆ ಸಲ್ಲಿಸುವ ಪುರೋಹಿತರು ಕೆಲವೊಮ್ಮೆ ಕಳ್ಳರಾಗಬಹುದು. ಆದರೆ ದೇವರು ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

‘ಕೆಲವೊಮ್ಮೆ ನಾನು ಕಳ್ಳನಾದರೂ ಮಮತಾ ಬ್ಯಾನರ್ಜಿ ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

ADVERTISEMENT

ಸಿಪಿಎಂ ಆಡಳಿತ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಅಕ್ರಮಗಳು ನಡೆದಿದೆ ಎಂದು ಇದೇ ವೇಳೆ ಅವರು ಆರೋಪಿಸಿದರು. ಎಡಪಕ್ಷಗಳ ಆಡಳಿತದ ವೇಳೆ ಒಬ್ಬನನ್ನು ರಿಜಿಸ್ಟ್ರಾರ್‌ ಆಗಿ ನೇಮಕ ಮಾಡಿದ್ದರು, ಆದರೆ ಅವರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 50ರಷ್ಟು ಅಂಕ ಕೂಡ ಇರಲಿಲ್ಲ ಎಂದು ಚಟ್ಟೊಪಾಧ್ಯಾಯ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.