ADVERTISEMENT

ಛತ್ತೀಸಗಢ: ನಕ್ಸಲರು ಇರಿಸಿದ್ದ ಸ್ಫೋಟಕಕ್ಕೆ ವ್ಯಕ್ತಿ ಬಲಿ

ಪಿಟಿಐ
Published 22 ಏಪ್ರಿಲ್ 2024, 11:31 IST
Last Updated 22 ಏಪ್ರಿಲ್ 2024, 11:31 IST
..
..   

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ಸ್ಫೋಟಕ ವಸ್ತುವಿನಿಂದ(ಐಇಡಿ) ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮುತವೆಂಡಿ ಗ್ರಾಮದ ಬಳಿ ಶನಿವಾರ ಘಟನೆ ಸಂಭವಿಸಿದ್ದು, ಸ್ಫೋಟಕ ವಸ್ತುವಿನ ಮೇಲೆ ಕಾಲಿಟ್ಟ ಸ್ಥಳೀಯ ನಿವಾಸಿ ಗಡಿಯ ಎಂಬುವವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸೋಮವಾರ ಮಾಹಿತಿ ದೊರಕಿದೆ.

ಬಸ್ತರ್‌ ಭಾಗದಲ್ಲಿ ಗಸ್ತು ತಿರುಗುವ ಪೊಲೀಸರನ್ನು ಗುರಿಯಾಗಿಸಿಕೊಂಡು ನಕ್ಸಲರು ಸ್ಫೋಟಕವನ್ನು ಇರಿಸುತ್ತಿದ್ದು, ಇದಕ್ಕೆ ನಾಗರಿಕರು ಕೂಡ ಬಲಿಯಾಗುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.