ಪುಣೆ:ಆತ್ಮಹತ್ಯೆಗೆಯತ್ನಿಸಿದ್ದಪ್ರಿಯತಮೆಯನ್ನು ಒತ್ತಡಕ್ಕೆ ಮಣಿದು ಆಸ್ಪತ್ರೆಯಲ್ಲಿಮದುವೆಯಾಗಿದ್ದ ಯುವಕ ಪರಾರಿಯಾಗಿರುವಘಟನೆಮಹಾರಾಷ್ಟ್ರದಪುಣೆಯಲ್ಲಿನಡೆದಿದೆ.
ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದಯುವತಿಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಪೋಷಕರು ಅವರನ್ನು ಸಮೀಪದಆಸ್ಪತ್ರೆಗೆ ದಾಖಲು ಮಾಡಿದ್ದರು.
ಆಸ್ಪತ್ರೆಯ ಐಸಿಯುನಲ್ಲಿಪ್ರೇಯಸಿಯನ್ನುಮದುವೆಯಾದ ಬಳಿಕಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.ಅತನವಿರುದ್ಧಮಹಿಳೆಯು ಅತ್ಯಾಚಾರದ ದೂರು ನೀಡಿದ್ದಾರೆ.
ಆರೋಪಿ ಸೂರಜ್ ವಿರುದ್ದಐಪಿಸಿಸೆಕ್ಷನ್ 376ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದುಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರಕಾಶ್ ರಾಥೋಡ್ ಅವರು ಹೇಳಿದ್ದಾರೆ.
ತನಿಖೆಯನ್ನುಆರಂಭಿಸಲಾಗಿದ್ದುಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆರೋಪಿಸೂರಜ್ ಬಲವಂತದಿಂದ ದೈಹಿಕ ಸಂಪರ್ಕಬೆಳೆಸಿದ್ದಾಗಿಮಹಿಳೆದೂರುನೀಡಿದ್ದಾರೆ. ಮದುವೆ ಪ್ರಸ್ತಾಪ ಮುಂದಿಟ್ಟಾಗ ಕೀಳು ಜಾತಿ ಎಂದು ನಿರಾಕರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಿಂದ ಮನನೊಂದ ಮಹಿಳೆ ನವೆಂಬರ್ 27ರಂದು ವಿಷ ಸೇವಿಸಿಆತ್ಮಹತ್ಯೆಗೆಯತ್ನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.