ADVERTISEMENT

ಜಾರ್ಖಂಡ್| ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವು

ಪಿಟಿಐ
Published 14 ಮೇ 2025, 11:16 IST
Last Updated 14 ಮೇ 2025, 11:16 IST
   

ಲೋಹರದಗಾ: ಜಾರ್ಖಂಡ್‌ನ ಲೋಹರದಗಾ ಬಳಿ 30 ವರ್ಷದ ವ್ಯಕ್ತಿಯೊಬ್ಬ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮಂಗಳವಾರ ರಾತ್ರಿ ಭತ್ತದ ಗದ್ದೆಯಿಂದ ಮನೆಗೆ ತೆರಳುವ ವೇಳೆ ಕಾಡಾನೆ ದಾಳಿಗೆ ಸಗಿರ್ ಅನ್ಸಾರಿ(30) ಎನ್ನುವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ‌.

ಘಟನೆಯಿಂದ ಉದ್ರಿಕ್ತರಾದ ಸ್ಥಳೀಯರು ಕಚ್ಚರಿ ಮೊರ್ ಬಳಿಯ ರಾಂಚಿ- ರೊರ್ಕೆಲಾ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಇದರಿಂದ, ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

ADVERTISEMENT

ಪೊಲೀಸರು ಹಾಗು ಅಧಿಕಾರಿಗಳು ಘಟನೆಯ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.