ADVERTISEMENT

ಮಣಿಪುರ: ಶಸ್ತ್ರಾಸ್ತ್ರ ಕದ್ದೊಯ್ದ ಪ್ರಕರಣ: ಚಾರ್ಜ್‌ಶೀ‍ಟ್‌ ಸಲ್ಲಿಕೆ

ಪಿಟಿಐ
Published 3 ಮಾರ್ಚ್ 2024, 13:00 IST
Last Updated 3 ಮಾರ್ಚ್ 2024, 13:00 IST
.
.   

ನವದೆಹಲಿ: ಕಳೆದ ವರ್ಷ ಮಣಿಪುರದಲ್ಲಿ ನಡೆದ ಹಿಂಸಾಚಾರ ಸಂದರ್ಭದಲ್ಲಿ ಬಿಷ್ಣುಪುರ ಪೊಲೀಸ್ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದ ಪ್ರಕರಣದ ಏಳು ಆರೋಪಿಗಳ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

ಅಸ್ಸಾಂ ಗುವಾಹಟಿಯ ಕಾಮರೂಪದಲ್ಲಿರುವ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಕಳೆದ ವರ್ಷದ ಆಗಸ್ಟ್‌ 3ರಂದು ಗುಂಪೊಂದು 300 ಶಸ್ತ್ರಾಸ್ತ್ರಗಳು, 19,800 ಮದ್ದುಗುಂಡುಗಳನ್ನು ಕದ್ದೊಯ್ದಿತ್ತು.

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ 219 ಮಂದಿ ಮೃತಪಟ್ಟಿದ್ದಾರೆ, ಹಲವರು ಗಾಯಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.