ADVERTISEMENT

ವಿದ್ಯಾರ್ಥಿನಿಯರ ಪರಿಶೀಲಿಸಿದ್ದ ಪ್ರಕರಣ: ಬಂಧನ

ಪಿಟಿಐ
Published 18 ಫೆಬ್ರುವರಿ 2020, 0:59 IST
Last Updated 18 ಫೆಬ್ರುವರಿ 2020, 0:59 IST
   

ಭುಜ್‌: ಇಲ್ಲಿನ ಶ್ರೀಶಹಜಾನಂದ ಬಾಲಕಿಯರ ಕಾಲೇಜಿನಲ್ಲಿ (ಎಸ್‌ಎಸ್‌ಜಿಐ) ವಾರದ ಹಿಂದೆ 60 ವಿದ್ಯಾರ್ಥಿನಿಯರಿಗೆ, ಅವರು ಋತುಸ್ರಾವಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ತಿಳಿಯಲು ಬಲವಂತವಾಗಿ ಅವರ ಉಡುಪು ತೆಗೆಸಿ ಪರಿಶೀಲಿಸಿದ್ದರು ಎಂಬ ಪ್ರಕರಣದ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಪಿಟಿಐ ಸ್ವಾಮಿನಾರಾಯಣ ದೇವಸ್ಥಾನದ ಟ್ರಸ್ಟ್ ಕಾಲೇಜು ನಡೆಸುತ್ತಿದೆ. ಕ್ರಾಂತಿಗುರು ಶ್ಯಾಮ್‌ಜೀ ಕೃಷ್ಣವರ್ಮಾ ಕುಛ್‌ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ.

ಕಾಲೇಜಿನ ಪ್ರಾಚಾರ್ಯ ರಿತಾ ರಾಣಿಂಗಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಮಿಲಿಬೆನ್‌ ಹಿರಾಣಿ, ಗುಮಾಸ್ತರಾದ ನೈನಾ ಗೊರಸಿಯ ಮತ್ತು ಅನಿತಾ ಚೌಹಾಣ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಕಾಯ್ದೆಯನ್ವಯ ಸುಲಿಗೆ, ಅಗೌರವ, ಕ್ರಿಮಿನಲ್‌ ಬೆದರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.