ADVERTISEMENT

ಪ್ರತಿಭಟನೆ ಮಧ್ಯೆ ಲಖನೌ ವಿ.ವಿಗೆ ಭಾಗವತ್‌ ಭೇಟಿ

ಪಿಟಿಐ
Published 18 ಫೆಬ್ರುವರಿ 2026, 14:10 IST
Last Updated 18 ಫೆಬ್ರುವರಿ 2026, 14:10 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಲಖನೌ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್‌ ಅವರು ಲಖನೌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳೊಂದಿಗೆ ಬುಧವಾರ ಸಂವಾದ ನಡೆಸಿದರು.

ಭಾಗವತ್‌ ಭೇಟಿಯ ವಿರುದ್ಧ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಪ್ರತಿಭಟಿಸಿತು. ಈ ಮಧ್ಯೆಯೂ ಅವರು ಚರ್ಚೆ ನಡೆಸಿದರು.

ಉತ್ತರ ಪ್ರದೇಶದ ಎನ್‌ಎಸ್‌ಯುಐನ ಉಪಾಧ್ಯಕ್ಷ ಅಹ್ಮದ್‌ ರಾಜಾ ಖಾನ್‌ ಅವರು, ‘ಆರ್‌ಎಸ್‌ಎಸ್‌ ಸಮಾಜವನ್ನು ಧ್ರುವೀಕರಿಸುತ್ತದೆ’ ಎಂದು ಆರೋಪಿಸಿದರು.‌

ADVERTISEMENT

‘ಜಾತ್ಯತೀತ ಮೌಲ್ಯಗಳ ಪ್ರಸರಣಕ್ಕೆ ಹೆಸರುವಾಸಿವಾಗಿರುವ ವಿಶ್ವವಿದ್ಯಾಲಯಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥರ ಭೇಟಿಯು ಸರಿಯಲ್ಲ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.

‘ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.