ಮೊಳಕಾಲ್ಮುರು: ಪಟ್ಟಣದಿಂದ ನೆರೆಯ ಆಂಧ್ರಪ್ರದೇಶಕ್ಕೆ, ಆ ರಾಜ್ಯದ ಸಾರಿಗೆ ಸಂಸ್ಥೆ ಬಸ್ಸೊಂದರಲ್ಲಿ ಇಟ್ಟಿಗೆ ಸಾಗಿಸುತ್ತಿದ್ದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ರಾಯದುರ್ಗ ರಸ್ತೆಯಲ್ಲಿರುವ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆಯ ಹತ್ತಿರ ಸ್ಥಾಪಿಸಿರುವ ಕೋವಿಡ್ ಚೆಕ್ಪೋಸ್ಟ್ ಬಳಿ ಬಸ್ ತಪಾಸಣೆ ಮಾಡಿದಾಗ ಇಟ್ಟಿಗೆ ತುಂಬಿರುವುದು ಕಾಣಸಿಕ್ಕಿದೆ. ಕೂಡಲೇ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ತಹಶೀಲ್ದಾರ್ ಬಸವರಾಜ್ ಬಸ್ ಅನ್ನು ವಶಕ್ಕೆ ಪಡೆಯಲು ಸೂಚಿಸಿದರು.
‘ಕೋವಿಡ್ ವಿಶೇಷ ಸಂಚಾರಕ್ಕಾಗಿ ಬಸ್ ಅನುಮತಿ ಪಡೆದುಕೊಂಡಿದೆ. ಯಾವ ಕಾರಣಕ್ಕಾಗಿ ಬಸ್ನಲ್ಲಿ ಈ ತರಹ ಇಟ್ಟಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪಟ್ಟಣಕ್ಕೆ ಸೋಮವಾರ ಸಂಸದರು ಭೇಟಿ ನೀಡಿದ್ದ ಕಾರಣ ಮಾಹಿತಿ ಪಡೆಯುವುದು ವಿಳಂಬವಾಗಿದೆ. ಮಂಗಳವಾರ ಈ ಬಗ್ಗೆ ವಿವರ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.