ADVERTISEMENT

ಭಾಭೀ ಜೀ ಕೆ ಪಾಪಡ್‌ ತಿಂದು ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆಯೇ?: ರಾವುತ್

ಏಜೆನ್ಸೀಸ್
Published 17 ಸೆಪ್ಟೆಂಬರ್ 2020, 9:44 IST
Last Updated 17 ಸೆಪ್ಟೆಂಬರ್ 2020, 9:44 IST
ಸಂಜಯ್ ರಾವುತ್
ಸಂಜಯ್ ರಾವುತ್   

ನವದೆಹಲಿ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ನಿಯಂತ್ರಣದ ಬಗ್ಗೆ ಕೆಲವು ರಾಜ್ಯಸಭಾ ಸದಸ್ಯರು ಟೀಕಿಸಿದ್ದರು. ಇದಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಶಿವಸೇನಾ ನಾಯಕ ಸಂಜಯ್ ರಾವುತ್, ನನ್ನ ಅಮ್ಮ ಮತ್ತು ಸಹೋದರನಿಗೆ ಕೋವಿಡ್ ಸೋಂಕು ತಗುಲಿದೆ.

ಮಹಾರಾಷ್ಟ್ರದಲ್ಲಿ ಹಲವಾರು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಧಾರಾವಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.ಬಿಎಂಸಿಯ ಕಾರ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.ಕೆಲವು ಸದಸ್ಯರು ನಿನ್ನೆ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದು, ಅವರಿಗೆ ಈ ವಿಷಯವನ್ನು ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ಇಷ್ಟೊಂದು ಮಂದಿಚೇತರಿಸಿಕೊಂಡಿದ್ದು ಹೇಗೆಎಂದು ನಾನು ಸದಸ್ಯರಲ್ಲಿ ಕೇಳಲು ಬಯಸುತ್ತೇನೆ.ಜನರು ಭಾಭೀ ಜೀ ಕೆ ಪಾಪಡ್ ತಿಂದು ಚೇತರಿಸಿಕೊಂಡಿದ್ದಾರೆಯೇ? ಇದು ರಾಜಕೀಯ ಹೋರಾಟ ಅಲ್ಲ, ಜನರನ್ನು ಬದುಕಿಸಲು ಇರುವ ಹೋರಾಟ ಎಂದು ರಾವುತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.