ಪುಣೆ (ಪಿಟಿಐ):’ಗಾಯಕ ಸಿಧು ಮೂಸೆವಾಲಾ ಗುಂಡೇಟಿಗೆ ಬಲಿಯಾದ ದಿನ ನಾನು ಗುಜರಾತ್ನಲ್ಲಿದ್ದೆ‘ ಎಂದು ಸಿಧು ಹತ್ಯೆ ಪ್ರಕರಣದ ಶಂಕಿತ ಆರೋಪಿ ಸಂತೋಷ್ ಜಾಧವ್ ಪೊಲೀಸರಿಗೆ ಹೇಳಿದ್ದಾನೆ.
ಆರೋಪಿ ಮೇ 29 ರಂದು ಗುಜರಾತ್ನ ಮುಂದ್ರಾ ಬಂದರಿನ ಬಳಿ ಹೋಟೆಲ್ನಲ್ಲಿ ತಂಗಿದ್ದಾಗಿ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಪರಿಶೀಲಿಸಲು ಗುಜರಾತ್ಗೆ ತಂಡ ಕಳುಹಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಸದಸ್ಯರಾದ ಜಾಧವ್ ಮತ್ತು ನವನಾಥ್ ಸೂರ್ಯವಂಶಿ ಅವರನ್ನು ಜೂನ್ 12 ರಂದು ಗುಜರಾತ್ನಿಂದ ಬಂಧಿಸಿ ಪುಣೆಗೆ ಕರೆತರಲಾಯಿತು. ಏತನ್ಮಧ್ಯೆ, ಕಾರ್ಯಾಚರಣೆ ಭಾಗವಾಗಿ ಪುಣೆಯ ಗ್ರಾಮಾಂತರ ಪೊಲೀಸರು ಆರು ಸಹಾಯಕರನ್ನು ಬಂಧಿಸಿ, ಅವರಿಂದ 13 ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಎಂಟು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.