ADVERTISEMENT

ಚಿಕಿತ್ಸೆಗಾಗಿ ಹೈದರಾಬಾದ್‌ಗೆ ‍ತೆರಳಲು ವರವರ ರಾವ್‌ಗೆ ಅನುಮತಿ

ಪಿಟಿಐ
Published 30 ನವೆಂಬರ್ 2023, 14:19 IST
Last Updated 30 ನವೆಂಬರ್ 2023, 14:19 IST
<div class="paragraphs"><p>ವರವರ ರಾವ್‌</p></div>

ವರವರ ರಾವ್‌

   

ಮುಂಬೈ: ಎಲ್ಗಾರ್‌ ಪರಿಷತ್– ಮಾವೊ ಸಂಪರ್ಕ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ, ಕವಿ ವರವರ ರಾವ್‌ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಪ್ರಯಾಣಿಸಲು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.

ಎಡಗಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಾಗಿ ಡಿ.5 ರಿಂದ 11ರ ನಡುವೆ ಹೈದರಾಬಾದ್‌ಗೆ ತೆರಳಲು ನ್ಯಾಯಾಧೀಶರಾದ ರಾಜೇಶ್‌ ಕಟಾರಿಯಾ ಅವರು ಅನುಮತಿ ನೀಡಿದರು.

ADVERTISEMENT

ಪ್ರಯಾಣದ ವಿವರಗಳು ಮತ್ತು ಹೈದರಾಬಾದ್‌ನಲ್ಲಿ ತಂಗಲಿರುವ ಸ್ಥಳದ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಡಿ.4 ರಂದು ಎನ್‌ಐಎಗೆ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ತಾವು ನೀಡಿರುವ ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆಯನ್ನೂ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.