ADVERTISEMENT

ಕಾಂಗ್ರೆಸ್‌ ಜತೆ ತಂದೆಗೆ ಉತ್ತಮ ಸ್ನೇಹವಿತ್ತು: ಭೂಗತ ದೊರೆ ಹಾಜಿ ಮಸ್ತಾನ್‌ ಪುತ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 14:37 IST
Last Updated 16 ಜನವರಿ 2020, 14:37 IST
ಪೊಲೀಸ್‌ ವಶದಲ್ಲಿರುವ ಭೂಗತ ಪಾತಕಿ ಹಾಜಿ ಮಸ್ತಾನ್‌ (ಸಂಗ್ರಹ ಚಿತ್ರ)
ಪೊಲೀಸ್‌ ವಶದಲ್ಲಿರುವ ಭೂಗತ ಪಾತಕಿ ಹಾಜಿ ಮಸ್ತಾನ್‌ (ಸಂಗ್ರಹ ಚಿತ್ರ)   

ಮುಂಬೈ: ಕಾಂಗ್ರೆಸ್‌ ಮುಖಂಡರು ಮತ್ತು ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆಯೊಂದಿಗೆನನ್ನ ತಂದೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಮುಂಬೈನ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್‌ ಅವರ ಮಗ ಸುಂದರ್‌ ಶೇಖರ್‌ ತಿಳಿಸಿದರು.

ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ನೊಂದಿಗೆ ನನ್ನ ತಂದೆಗೆ ಉತ್ತಮ ಸಂಬಂಧವಿತ್ತು’ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

‘ನನ್ನ ತಂದೆಯು ಬಾಳ ಠಾಕ್ರೆ ಸೇರಿ ಪ್ರಮುಖ ರಾಜಕೀಯ ಮುಖಂಡರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು’ ಎಂದು ಹೇಳಿದ್ದಾರೆ.

ADVERTISEMENT

ಪುಣೆಯಲ್ಲಿ ನಡೆದ ಖಾಸಗಿ ಟಿ.ವಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಶಿವಸೇನಾ ವಕ್ತಾರ ಸಂಜಯ್‌ ರಾವುತ್‌, ರೌಡಿ ಹಾಜಿ ಮಸ್ತಾನ್‌ ಮಂತ್ರಾಲಯಕ್ಕೆ ಬಂದಿದ್ದಾಗ ಸರ್ಕಾರದ ಎಲ್ಲ ಅಧಿಕಾರಿಗಳು ಆತನನ್ನು ನೋಡಲು ಬಂದಿದ್ದರು. ಇಂದಿರಾಗಾಂಧಿ ಅವರೂ ದಕ್ಷಿಣ ಮುಂಬೈನ ಪಾಯ್‌ದೋನಿಯಲ್ಲಿ ಕರೀಂಲಾಲಾನನ್ನು ಭೇಟಿಯಾಗಿದ್ದರು ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದರು.

ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರಸುಂದರ್‌ ಶೇಖರ್‌ ಅವರ ಹೇಳಿಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.