ADVERTISEMENT

ನಾರಾಯಣ ರಾಣೆ ಹೇಳಿಕೆ ಅಸಾಂವಿಧಾನಿಕ, ಆದರೆ ಹಗೆತನ ಉತ್ತೇಜಿಸುವುದಿಲ್ಲ: ಕೋರ್ಟ್‌

ಪಿಟಿಐ
Published 2 ಏಪ್ರಿಲ್ 2023, 12:44 IST
Last Updated 2 ಏಪ್ರಿಲ್ 2023, 12:44 IST
.
.   

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರು 2021ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ನೀಡಿರುವ ಹೇಳಿಕೆ ‘ಅಸಾಂವಿಧಾನಿಕ’. ಆದರೆ ಅದು ಹಗೆತನವನ್ನು ಉತ್ತೇಜಿಸುವಂತಿಲ್ಲ, ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.

ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ರಾಯಗಢದ ಸಿಜೆಎಂ ನ್ಯಾಯಾಧೀಶ ಎಸ್‌.ಡಬ್ಲ್ಯು ಉಗಳೆ ಅವರು, ಆರೋಪಿ ನೀಡಿದ ಹೇಳಿಕೆಯು ‘ವಿವಾದಾತ್ಮಕ ಮತ್ತು ರಾಜಕೀಯವಾಗಿ ಸಂವೇದನಾರಹಿತ’ ಎಂದು ಹೇಳಬಹುದು. ಕೇಂದ್ರ ಸಚಿವ ಸ್ಥಾನ ಹುದ್ದೆ ಅಲಂಕರಿಸಿರುವ ವ್ಯಕ್ತಿಯಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಆದರೆ ಲಭ್ಯವಿರುವ ದಾಖಲೆಗಳು ರಾಣೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪುಷ್ಠೀಕರಿಸುವುದಿಲ್ಲ. ಹಾಗಾಗಿ ಈ ಆರೋಪಗಳು ‘ಆಧಾರರಹಿತ’ ಎಂದು ಅವರನ್ನು ದೋಷ ಮುಕ್ತಗೊಳಿಸಿದರು.

‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷವೇ ತಿಳಿಯದೇ ಇರುವುದು ನಾಚಿಕೆಗೇಡಿನ ಸಂಗತಿ. ಆ ಸಂದರ್ಭದಲ್ಲಿ ನಾನು ಇದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ರಾಣೆ ಹೇಳಿದ್ದರು. ಈ ಸಂಬಂಧ ಅವರ ವಿರುದ್ಧ 2021ರಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.