ಅಂಬಾಲ: ಹರ್ಯಾಣಮೂಲದ ಸಂತೋಷ್ ಮತ್ತು ಸುಷ್ಮಾ ಎಂಬ ಸಹೋದರಿಯರು ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆಪಾಸ್ಪೋರ್ಟ್ ಕಚೇರಿಯ ಸಿಬ್ಬಂದಿ ಈ ಸಹೋದರಿಯರು 'ನೇಪಾಳದವರಂತೆ ಕಾಣುತ್ತಿದ್ದಾರೆ' ಎಂಬ ಕಾರಣ ನೀಡಿ ಪಾಸ್ಪೋರ್ಟ್ ಅರ್ಜಿ ತಿರಸ್ಕರಿಸಿರುವ ಘಟನೆ ನಡೆದಿದೆ.
ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಈ ಸಹೋದರಿಯರು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರು.ಆದರೆ ಈ ದಾಖಲೆಗಳನ್ನು ಪರಿಶೀಲಿಸುವ ಮುನ್ನವೇ ಮುಖ ನೋಡಿ ನೀವು ನೇಪಾಳದವರಂತೆ ಕಾಣುತ್ತಿದ್ದೀರಿ ಎಂದು ಪಾಸ್ಪೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಅಲ್ಲಿನ ಅಧಿಕಾರಿಗಳು.
ಇದಾದ ನಂತರ ಈಸಹೋದರಿಯರು ಹರ್ಯಾಣದ ಮುಖ್ಯಮಂತ್ರಿ ಅನಿಲ್ ವಿಜ್ ಅವರ ನಿವಾಸಕ್ಕೆ ತೆರಳಿ ಪಾಸ್ಪೋರ್ಟ್ ಕಚೇರಿಯಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ಸಹೋದರಿಯರದೂರು ಆಲಿಸಿದ ಮುಖ್ಯಮಂತ್ರಿಈ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತ ಅಶೋಕ್ ಶರ್ಮಾ ಅವರಿಗೆ ಆದೇಶಿಸಿದ್ದಾರೆ.
ದಾಖಲೆಗಳನ್ನು ಪರಿಶೀಲಿಸದೆಸಹೋದರಿಯರ ಮುಖ ನೋಡಿ 'ರಾಷ್ಟ್ರೀಯತೆ' ಅಳೆದ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳನ್ನು ಅಶೋಕ್ ಶರ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ನಂತರ ಸಹೋದರಿಯರಿಗೆ ಪಾಸ್ಪೋರ್ಟ್ ನೀಡಲು ಸಿದ್ಧತೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.