ಮಾನಪುರ: ನಕ್ಸಲ್ ರೂಪೇಶ್ ಮಾಂಡವಿ ಅಲಿಯಾಸ್ ಸುಖದೇವ್ ಮಂಗಳವಾರ ಛತ್ತೀಸಗಢ ಪೊಲೀಸರಿಗೆ ಶರಣಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ₹5 ಲಕ್ಷ ಇನಾಮು ಘೋಷಿಸಲಾಗಿತ್ತು.
2012ರಲ್ಲಿ ನಕ್ಸಲ್ ಚಳವಳಿಗೆ ಸೇರಿದ್ದ ಸುಖದೇವ್, ಕೋಟರಿ ಪ್ರದೇಶ ಸಮಿತಿಯ ಸದಸ್ಯನಾಗಿದ್ದ ಮತ್ತು ರಾಜನಂದಗಾಂವ್–ಕಾಂಕರ್ ಗಡಿ ವಿಭಾಗದ ಸ್ಥಳೀಯ ಸಂಘಟನೆಯ ಸ್ಕ್ವಾಡ್ ಉಪ ಕಮಾಂಡರ್ ಆಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.