ADVERTISEMENT

ಲೋಕಸಭಾ ಚುನಾವಣೆ | ಕೇರಳದಲ್ಲಿ ಎನ್‌ಡಿಎ ‘ಪಾದಯಾತ್ರೆ‘ಗೆ ಚಾಲನೆ

ಪಿಟಿಐ
Published 27 ಜನವರಿ 2024, 16:15 IST
Last Updated 27 ಜನವರಿ 2024, 16:15 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಕಾಸರಗೋಡು : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಶನಿವಾರ ಕೇರಳದ ಕಾಸರಗೋಡಿನಲ್ಲಿ ಪಾದಯಾತ್ರೆಗೆ ಚಾಲನೆ ನೀಡಿತು.

ಇಲ್ಲಿನ ಥಳಿಪ್ಪಡುಪು ಮೈದಾನದಲ್ಲಿ ನಡೆದ ರಾಜ್ಯವ್ಯಾಪಿ ಪಾದಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಎನ್‌ಡಿಎ ರಾಜ್ಯ ಸಂಚಾಲಕ ತುಷಾರ್ ವೆಳ್ಳಪಳ್ಳಿ ಮತ್ತು ಎನ್‌ಡಿಎ ಉಪಾಧ್ಯಕ್ಷ ಪಿ ಕೆ ಕೃಷ್ಣದಾಸ್ ಮುಂತಾದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.      

ಪಾದಯಾತ್ರೆ ಉದ್ಘಾಟಿಸಿದ ಪ್ರಮೋದ್ ಸಾವಂತ್, ‘ರಾಜ್ಯದಲ್ಲಿ ಪಾದಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಮಲ ಅರಳಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಲ್ಲಿ ಸಾಗುವ ಪಾದಯಾತ್ರೆಯು ಜನವರಿ 27ರಂದು ಪಾಲಕ್ಕಾಡ್‌ನಲ್ಲಿ ಸಮಾರೋಪಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.