ನವದೆಹಲಿ: ಎನ್ಡಿಎ ಅಂದರೆ ‘ನೋ ಡಾಟಾ ಅವೈಲಬಲ್’ ಎಂದು ಸರ್ಕಾರವನ್ನು ಲೇವಡಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದು ಯಾವುದೇ ಉತ್ತರ ನೀಡುವುದಿಲ್ಲ ಮತ್ತು ಹೊಣೆಗಾರಿಕೆ ಹೊಂದಿಲ್ಲ ಎಂದು ಹೇಳಿದ್ದಾರೆ.
‘ಆಮ್ಲಜನಕದ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ. ಯಾವುದೇ ರೈತ ಪ್ರತಿಭಟನೆಯಿಂದ ಸಾವಿಗೀಡಾಗಿಲ್ಲ, ವಲಸಿಗ ನಡೆದುಕೊಂಡು ಹೋಗುವಾಗ ಸತ್ತಿಲ್ಲ. ಯಾವುದೇ ಪತ್ರಕರ್ತನನ್ನು ಬಂಧಿಸಿಲ್ಲ’ ಎಂಬುದನ್ನು ಎನ್ಡಿಎ ಸರ್ಕಾರ ನಂಬುವಂತೆ ಬಯಸುತ್ತದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
‘ದತ್ತಾಂಶವಿಲ್ಲ. ಉತ್ತರಗಳಿಲ್ಲ. ಉತ್ತರದಾಯಿತ್ವವಿಲ್ಲ’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.