ADVERTISEMENT

ಕೆನ್ಯಾ: ಅಪಹೃತ ಭಾರತೀಯರ ಪತ್ತೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 3:12 IST
Last Updated 25 ಅಕ್ಟೋಬರ್ 2022, 3:12 IST

ನವದೆಹಲಿ: ಕೆನ್ಯಾದಲ್ಲಿ ಇಬ್ಬರು ಭಾರತೀಯರ ಅಪಹರಣವಾಗಿದ್ದು, ಅಲ್ಲಿರುವ ಭಾರತೀಯ ರಾಯಭಾರಿ ನಮ್‌ಗ್ಯಾ ಖಂಪಾ ಅವರು ಕೆನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ಅವರನ್ನು ಭೇಟ್ಯಾಗಿ ಈ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ನಾಪತ್ತೆಯಾಗಿರುವ ಭಾರತೀಯರಾದ ಮೊಹಮ್ಮದ್ ಜೈದ್ ಸಮಿ ಕಿದ್ವಾಯಿ ಮತ್ತು ಜುಲ್ಫಿಕರ್ ಅಹ್ಮದ್ ಖಾನ್ ಎಂಬುವವರನ್ನು ಹತ್ಯೆಗೀಡಾಗಿದ್ದಾರೆ ಎಂದು ಅಧ್ಯಕ್ಷರ ಆಪ್ತರೊಬ್ಬರು ಕಳೆದ ವಾರ ಹೇಳಿದ್ದರು.

ಕೆನ್ಯಾ ಕ್ವಾನ್ಜಾ ಡಿಜಿಟಲ್ ಪ್ರಚಾರ ತಂಡದಲ್ಲಿದ್ದ ಕಿದ್ವಾಯಿ ಮತ್ತು ಖಾನ್‌ ಅವರು ಟ್ಯಾಕ್ಸಿ ಚಾಲಕನ ಜೊತೆ ಮೊಂಬಾಸಾ ರಸ್ತೆಯಿಂದ ಜುಲೈ ತಿಂಗಳಲ್ಲಿ ನಾಪತ್ತೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.