ADVERTISEMENT

ರಂಜಾನ್: ಮುಸ್ಲಿಂ ನೌಕರರು ಬೇಗ ಮನೆಗೆ ತೆರಳುವ ಅವಕಾಶದ ಆದೇಶಕ್ಕೆ ಕೊಕ್ಕೆ

ಪಿಟಿಐ
Published 6 ಏಪ್ರಿಲ್ 2022, 15:31 IST
Last Updated 6 ಏಪ್ರಿಲ್ 2022, 15:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ(ಪಿಟಿಐ): ರಂಜಾನ್ ಮಾಸದ ಪ್ರಯುಕ್ತ ಉಪವಾಸ ಆಚರಿಸುತ್ತಿರುವ ತನ್ನ ಮುಸ್ಲಿಂ ನೌಕರರಿಗೆ ಬೇಗ ಮನೆಗೆ ತೆರಳಲು ಅವಕಾಶ ಕಲ್ಪಿಸಿದ್ದ ಆದೇಶವನ್ನು ದೆಹಲಿ ನಗರಸಭೆ (ಎನ್‌ಡಿಎಂಸಿ) ಹಿಂಪಡೆದಿದೆ.

ಉಪವಾಸ ಆಚರಣೆಯಲ್ಲಿರುವ ನೌಕರರಿಗೆ ಕಚೇರಿಯಿಂದ ಬೇಗ ಮನೆಗೆ ತೆರಳಲು ಅವಕಾಶ ಕಲ್ಪಿಸುವ ಆದೇಶವನ್ನುಎನ್‌ಡಿಎಂಸಿ ಮಂಗಳವಾರ ಹೊರಡಿಸಿತ್ತು. ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ್ ಅವರು ಇಂಥ ಕ್ರಮವು ಜಾತ್ಯತೀತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರವು, ಈ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಿದೆ ಎಂದು ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.