ADVERTISEMENT

ಕೋವಿಡ್–19 ಸೋಂಕು ಭೀತಿ: ಚೆನ್ನೈನಲ್ಲಿ ಆಧಾರ್ ಕಾರ್ಡ್‌ ತೋರಿಸಿದರಷ್ಟೇ ಹೇರ್‌ಕಟ್!

ಏಜೆನ್ಸೀಸ್
Published 2 ಜೂನ್ 2020, 8:09 IST
Last Updated 2 ಜೂನ್ 2020, 8:09 IST
   

ಚೆನ್ನೈ: ನಗರದಲ್ಲಿರುವ ಸಲೂನ್‌ಗಳಲ್ಲಿ ಗ್ರಾಹಕರ ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಕ್ಷೌರ ಮಾಡಲಾಗುತ್ತದೆ. ಯಾವುದೇ ಗ್ರಾಹಕರಿಗೆ ಸೇವೆ ಒದಗಿಸುವ ಮುನ್ನ ಅವರ ಹೆಸರು ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆಧಾರ್‌ಕಾರ್ಡ್‌ ಸಂಖ್ಯೆಯನ್ನು ಕಡ್ಡಾಯಬಾಗಿ ದಾಖಲಿಸುವಂತೆ ಸರ್ಕಾರ ಹೊಸ ನಿಯಮ ರೂಪಿಸಿದೆ.

ತಮಿಳುನಾಡಿನಲ್ಲಿ ಸಲೂನ್‌ಗಳನ್ನು ಪುನಃ ತೆರೆಯಲು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅದರಂತೆ ಸಲೂನ್‌ಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಲಿ ಪಾಲಿಸಬೇಕಾಗಿದೆ.

ತಮಿಳುನಾಡಿನಲ್ಲಿ ಜೂನ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಕೆಲವು ನಿರ್ಬಂಧಗಳನ್ನು ಸಡಿಲಿಸಿ ಸಾರಿಗೆ, ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಷರುತ್ತುಬದ್ಧ ಅನುಮತಿ ನೀಡಲಾಗಿದೆ.

ADVERTISEMENT

ಕೋವಿಡ್‌–19 ಸೋಂಕು ಭೀತಿಯಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿತ್ತು. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಈಗಲೂ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ತಮಿಳುನಾಡು ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಲೂನ್‌ಗಳನ್ನು ತೆರೆಯಲು ಮೇ ತಿಂಗಳಲ್ಲಿ ಅವಕಾಶ ನೀಡಿತ್ತು.

ದೇಶದಲ್ಲಿ ಅತಿಹೆಚ್ಚು ಸೋಂಕು ಕಾಣಿಸಿಕೊಂಡ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು 2ನೇ ಸ್ಥಾನದಲ್ಲಿದೆ. ಇಲ್ಲಿ 23,495 ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.