ADVERTISEMENT

ಎಎಪಿ ಕೌನ್ಸಿಲರ್‌ಗಳು ದೆಹಲಿ ನಗರವನ್ನು ಸ್ವಚ್ಛಗೊಳಿಸುತ್ತಿದ್ದಾರೆ: ಕೇಜ್ರಿವಾಲ್

ಪಿಟಿಐ
Published 16 ಡಿಸೆಂಬರ್ 2022, 9:43 IST
Last Updated 16 ಡಿಸೆಂಬರ್ 2022, 9:43 IST
ಚಿತ್ರ ಕೃಪೆ: Twitter/@iRaminderKaur
ಚಿತ್ರ ಕೃಪೆ: Twitter/@iRaminderKaur   

ನವದೆಹಲಿ: ಹೊಸದಾಗಿ ಚುನಾಯಿತರಾದ ಆಮ್ ಆದ್ಮಿ ಪಕ್ಷದ (ಎಎಪಿ) ಮುನ್ಸಿಪಲ್ ಕೌನ್ಸಿಲರ್‌ಗಳು ದೆಹಲಿಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ನಗರದ ನೈರ್ಮಲ್ಯ ಹಾಗೂ ಸ್ವಚ್ಛತೆಗಾಗಿ ಸ್ವಚ್ಛತಾ ಕಾರ್ಮಿಕರೊಂದಿಗೆ ಕೌನ್ಸಿಲರ್‌ಗಳು ಭಾಗವಹಿಸಬೇಕಾದ ಮಹತ್ವದ ಬಗ್ಗೆ ಅವರು ಪ್ರತಿಪಾದಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎಎಪಿ ಕೌನ್ಸಿಲರ್‌ಗಳು ನಗರ ಶುಚಿಗೊಳಿಸುವ ಚಿತ್ರವನ್ನು ಹಂಚಿದ್ದಾರೆ.

ADVERTISEMENT

ಕಳೆದ ಕೆಲವು ದಿನಗಳಿಂದ ಇಂತಹ ಚಿತ್ರಗಳು ಬರುತ್ತಿವೆ. ಹೊಸದಾಗಿ ಚುನಾಯಿತರಾದ ಎಎಪಿ ಕೌನ್ಸಿಲರ್‌ಗಳು ಸ್ವಚ್ಛತಾ ಕಾರ್ಮಿಕರೊಂದಿಗೆ ದೆಹಲಿಯ ಮೂಲೆ ಮೂಲೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ಕಾರ್ಮಿಕರನ್ನು ಹಿಂದೆ ಕೆಟ್ಟವರಂತೆ ಬಿಂಬಿಸಲಾಗುತ್ತಿತ್ತು. ಅಂತವರೇ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲ ಕೌನ್ಸಿಲರ್‌ಗಳು ತಮ್ಮ ಪ್ರದೇಶದಲ್ಲಿ ಶುಚಿಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.