ADVERTISEMENT

ಹೂಗ್ಲಿಗೆ ಹೊರಟಿದ್ದ ಎನ್‌ಜಿಒ ತಂಡಕ್ಕೆ ತಡೆ

ಪಿಟಿಐ
Published 8 ಏಪ್ರಿಲ್ 2023, 14:17 IST
Last Updated 8 ಏಪ್ರಿಲ್ 2023, 14:17 IST
.
.   

ಕೋಲ್ಕತ್ತ: ಹಿಂಸಾಚಾರ ಪೀಡಿತ ಹೂಗ್ಲಿ ಜಿಲ್ಲೆಗೆ ತೆರಳುತ್ತಿದ್ದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ತಂಡವನ್ನು ಶನಿವಾರ ಪೊಲೀಸರು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪಟ್ನಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಲ್‌.ನರಸಿಂಹ ರೆಡ್ಡಿ ನೇತೃತ್ವದ ಆರು ಮಂದಿಯನ್ನು ಒಳಗೊಂಡ ‘ಸತ್ಯಶೋಧನಾ ತಂಡ’ವನ್ನು ಕೊನ್ನಗರ್‌ ಬಳಿ ತಡೆಯಲಾಗಿದೆ. ತಂಡವು ಶ್ರೀರಾಮ್‌ಪುರ ಮತ್ತು ರಿಶಿರಾಗೆ ತೆರಳುತ್ತಿತ್ತು. ಈ ಪ್ರದೇಶಗಳ ಭೇಟಿಗೆ ಸದ್ಯ ನಿಷೇಧವಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಂಡವು ಭಾನುವಾರ ಹೌರಾ ಜಿಲ್ಲೆಯ ಶಿಬ್‌ಪುರ್‌ಗೆ ತೆರಳಲು ಸಿದ್ಧವಾಗಿತ್ತು. ರಾಜ್ಯ ಗೃಹ ಕಾರ್ಯದರ್ಶಿ ಬಿ.ಪಿ.ಗೋಪಲಿಕಾ ಅವರ ಭೇಟಿಗೂ ಅನುಮತಿ ಕೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.