ADVERTISEMENT

ಜಮ್ಮು–ಕಾಶ್ಮೀರ, ದೆಹಲಿಯ 6 ಎನ್‌ಜಿಒ, ಟ್ರಸ್ಟ್‌ ಮೇಲೆ ಎನ್‌ಐಎ ದಾಳಿ

ಭಯೋತ್ಪಾದಕ ಕೃತ್ಯಕ್ಕೆ ಧನ ಸಹಾಯ ಪ್ರಕರಣ

ಪಿಟಿಐ
Published 29 ಅಕ್ಟೋಬರ್ 2020, 6:18 IST
Last Updated 29 ಅಕ್ಟೋಬರ್ 2020, 6:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ದತ್ತಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ ದೇಣಿಗೆ ರೂಪದ ಹಣವನ್ನು ‘ಪ್ರತ್ಯೇಕತವಾದಿ ಚಟುವಟಿಕೆ‘ಗಳಿಗೆ ಬಳಸಿದ ಆರೋಪದ ಮೇಲೆರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿಯಲ್ಲಿರುವ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಗೂ ದೆಹಲಿಯಲ್ಲಿರುವ ಆರು ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಹಲವು ಅಪಾದನೆಗೆ ಗುರಿಯಾಗುವಂತಹ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ದೆಹಲಿಯ ಚಾರಿಟಿ ಅಲಯನ್ಸ್‌, ಫಾಲಹ್‌ ಇ–ಆಮ್‌ ಟ್ರಸ್ಟ್‌, ಹ್ಯೂಮನ್ ವೆಲ್‌ಫೇರ್‌ ಫೌಂಡೇಷನ್‌, ಜೆಕೆ ಯತೀಮ್ ಫೌಂಡೇಷನ್‌, ಸಾಲ್ವೇಷನ್ ಮೂವ್‌ಮೆಂಟ್‌ ಮತ್ತು ಜೆಕೆ ವಾಯ್ಸ್‌ ಆಫ್ ವಿಕ್ಟಿಮ್ಸ್‌ ಸಂಸ್ಥೆಗಳಲ್ಲಿ ಎನ್‌ಐಎ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ಕೆಲವು ಎನ್‌ಜಿಒಗಳು ದೇಶ ಮತ್ತು ವಿದೇಶಗಳಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಮತ್ತು ವ್ಯಾಪಾರದ ಪಾಲುದಾರಿಕೆಯ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಉಪಯೋಗಿಸುತ್ತಿವೆ ಎಂಬ ವಿಶ್ವಾರ್ಹ ಮಾಹಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಂದು ಐಪಿಸಿ ಸೆಕ್ಷನ್‌ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ದೂರು ದಾಖಲಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.