ADVERTISEMENT

ಯಾರ ಖಾಸಗಿತನವೂ ಉಳಿದಿಲ್ಲ: ‘ಸುಪ್ರೀಂ’ ಬೇಸರ

ಛತ್ತೀಸಗಡದ ಐಪಿಎಸ್ ಅಧಿಕಾರಿ ದೂರವಾಣಿ ಕದ್ದಾಲಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:44 IST
Last Updated 4 ನವೆಂಬರ್ 2019, 19:44 IST
   

ನವದೆಹಲಿ: ಛತ್ತೀಸಗಡದ ಹಿರಿಯ ಐಪಿಎಸ್ ಅಧಿಕಾರಿ ಮುಖೇಶ್ ಗುಪ್ತಾ ಹಾಗೂ ಅವರ ಕುಟುಂಬದ ದೂರವಾಣಿ ಕದ್ದಾಲಿಕೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ‘ಯಾರ ಖಾಸಗಿತನವೂ ಉಳಿದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿಯೊಬ್ಬರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಪರಿ ಇದೇನಾ ಎಂದು ರಾಜ್ಯ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.

ದೂರವಾಣಿ ಕದ್ದಾಲಿಕೆ ಮಾಡಲು ಆದೇಶಿಸಿದವರು ಯಾರು ಮತ್ತು ಅದಕ್ಕೆ ಕಾರಣ ಏನು ಎಂಬ ಬಗ್ಗೆ ವಿಸ್ತೃತ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠವು ಛತ್ತೀಸಗಡ ಸರ್ಕಾರಕ್ಕೆ ಸೂಚನೆ ನೀಡಿತು.

ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಹೆಸರನ್ನು ದೂರುದಾರರ ಅರ್ಜಿಯಿಂದ ತೆಗೆದುಹಾಕುವಂತೆ ತಿಳಿಸಿತು.

ADVERTISEMENT

**

ದೂರವಾಣಿ ಕದ್ದಾಲಿಕೆಯ ಅಗತ್ಯವೇನು? ಈ ದೇಶದಲ್ಲಿ ಏನಾಗುತ್ತಿದೆ? ಮುಖ್ಯಮಂತ್ರಿ ಹೆಸರನ್ನು ಪ್ರಕರಣದಲ್ಲಿ ಎಳೆದು ತರುವ ಅಗತ್ಯವಿಲ್ಲ.
-ಸುಪ್ರೀಂಕೋರ್ಟ್ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.