ADVERTISEMENT

ಪಕ್ಷದ ಯಾರೊಂದಿಗೂ ಅಸಮಾಧಾನವಿಲ್ಲ: ತರೂರ್‌

ಪಿಟಿಐ
Published 27 ನವೆಂಬರ್ 2022, 10:40 IST
Last Updated 27 ನವೆಂಬರ್ 2022, 10:40 IST
ಶಶಿ ತರೂರ್‌
ಶಶಿ ತರೂರ್‌   

ಕೊಚ್ಚಿ: ಪಕ್ಷದ ಕೇರಳ ಘಟಕದ ಯಾರೊಂದಿಗೂ ಅಸಮಾಧಾನವಾಗಲೀ ಸಿಟ್ಟಾಗಲೀ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಭಾನುವಾರ ಹೇಳಿದ್ದಾರೆ.

ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪರಸ್ಪರ ಮಾತನಾಡುವುದನ್ನು ತಡೆಯಲು ನಾವೇನು ಶಿಶುವಿಹಾರದಲ್ಲಿಲ್ಲ’ ಎಂದಿದ್ದಾರೆ.

‘ನಾನು ಪಕ್ಷದ ಯಾರ ವಿರುದ್ಧವೂ ಮಾತನಾಡಿಲ್ಲ ಮತ್ತು ಪಕ್ಷದ ನಿರ್ದೇಶನಗಳನ್ನು ಅಲ್ಲಗಳೆದಿಲ್ಲ. ಆದರೂ ವಿವಾದಗಳು ಯಾಕೆ ಸೃಷ್ಟಿಯಾಗಿವೆ ಎಂಬುದು ತಿಳಿದಿಲ್ಲ’ ಎಂದೂ ತಿಳಿಸಿದ್ದಾರೆ.

ADVERTISEMENT

ಶಶಿ ತರೂರು ಅವರು ಈಚೆಗೆ ನಡೆಸಿರುವ ಮಲಬಾರ್‌ ಪ್ರವಾಸಕ್ಕೆ ಪಕ್ಷದೊಳಗಿನ ವಿಭಾಗವೊಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

‘ಪಕ್ಷದೊಳಗೆ ಭಿನ್ನಮತಕ್ಕೆ ಆಸ್ಪದವಿಲ್ಲ. ಇಂತಹ ಚಟುವಟಿಕೆ ನಡೆಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಕೇರಳ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿ.ಡಿ. ಸತೀಶನ್‌ ಅವರು ಈಚೆಗೆ ತರೂರ್‌ ಅವರ ಹೆಸರು ಪ್ರಸ್ತಾಪಿಸದೆ ಎಚ್ಚರಿಕೆ ಕೂಡ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.