ADVERTISEMENT

ಭದ್ರತಾ ಕ್ರಮ: ಇನ್ನೂ ಕೆಲ ದಿನ ಜಮ್ಮು–ಕಾಶ್ಮೀರದಲ್ಲೇ ಇರಲಿದ್ದಾರೆ ಅಜಿತ್ ಡೊಭಾಲ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 9:13 IST
Last Updated 12 ಆಗಸ್ಟ್ 2019, 9:13 IST
ಜಮ್ಮು–ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಜತೆ ಅಜಿತ್ ಡೊಭಾಲ್ –ಎಎನ್‌ಐ ಚಿತ್ರ
ಜಮ್ಮು–ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಜತೆ ಅಜಿತ್ ಡೊಭಾಲ್ –ಎಎನ್‌ಐ ಚಿತ್ರ   

ನವದೆಹಲಿ:ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಿಗಾ ಇರಿಸುವ ಸಲುವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್ಎ) ಅಜಿತ್ ಡೊಭಾಲ್ ಅವರು ಇನ್ನೂ ಕೆಲವು ದಿನಜಮ್ಮು–ಕಾಶ್ಮೀರದಲ್ಲಿ ಉಳಿಯಲಿದ್ದಾರೆ.

ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅವರು ಆಗಸ್ಟ್‌ 5ರಂದು ಶ್ರೀನಗರಕ್ಕೆ ತೆರಳಿದ್ದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಿಶೇಷ ಸ್ಥಾನಮಾನ ರದ್ದು ನಿರ್ಧಾರವನ್ನು ರಾಜ್ಯಸಭೆಯಲ್ಲಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಡೊಭಾಲ್ ಅವರು ಶ್ರೀನಗರ ತಲುಪಿದ್ದರು. ನಂತರ ಈವರೆಗೆ ಕಾಶ್ಮೀರದ ಹಲವು ಪ್ರದೇಶಗಳಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಗ್ರಪೀಡಿತ ದಕ್ಷಿಣ ಕಾಶ್ಮೀರದ ಶೋಪಿಯಾನ್‌ಗೂ ಅವರು ಭೇಟಿ ನೀಡಿದ್ದರು.

ಭದ್ರತಾ ಅಧಿಕಾರಿಗಳನ್ನು ಅವಲಂಬಿಸುವ ಬದಲು ಖುದ್ದು ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸುವುದು ಡೊಭಾಲ್ ಉದ್ದೇಶ ಎಂದು ಮೂಲಗಳನ್ನು ಉಲ್ಲೇಖಿಸಿದಿ ಪ್ರಿಂಟ್ವರದಿ ಮಾಡಿದೆ.

ಭಾನುವಾರ ದೆಹಲಿಗೆ ಬಂದಿದ್ದ ಅವರು ಕೆಲವೇ ಗಂಟೆಗಳಲ್ಲಿ ಮತ್ತೆ ಜಮ್ಮು–ಕಾಶ್ಮೀರಕ್ಕೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.