ನವದೆಹಲಿ: ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲೇ ಶ್ರೀಲಂಕಾ ಹಾಗೂ ಪಾಕಿಸ್ತಾನದ ಯುದ್ಧನೌಕೆಗಳು ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಸೋಮವಾರ ಜಂಟಿ ಕವಾಯತು ನಡೆಸಲಿವೆ.
‘ಪಾಕಿಸ್ತಾನದ ನೌಕಾಪಡೆಗೆ ಸೇರಿದ ‘ಪಿಎನ್ಎಸ್ ತೈಮೂರ್’ ಹಾಗೂ ಶ್ರೀಲಂಕಾ ನೌಕಾಪಡೆಗೆ ಸೇರಿದ ‘ಎಸ್ಎಲ್ಎನ್ಎಸ್ ಸಿಂಧೂರಳಾ’ ಯುದ್ಧನೌಕೆಗಳು ಜಂಟಿಯಾಗಿ ಕವಾಯತು ನಡೆಸಲಿವೆ. ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಹಾಗೂ ಸಹಕಾರವನ್ನು ಬಲಪಡಿಸುವುದು ಇದರ ಉದ್ದೇಶ’ ಎಂದು ಶ್ರೀಲಂಕಾದ ನೌಕಾಪಡೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.