ADVERTISEMENT

ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಸಂಚು: ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್‌

ಏಜೆನ್ಸೀಸ್
Published 18 ನವೆಂಬರ್ 2020, 11:05 IST
Last Updated 18 ನವೆಂಬರ್ 2020, 11:05 IST
ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ರಾಮೇಶ್ವರ್‌ ಶರ್ಮಾ
ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ರಾಮೇಶ್ವರ್‌ ಶರ್ಮಾ    

ಭೋಪಾಲ್‌: ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಐಎಸ್‌ಐ ಏಜೆಂಟರು ಸಂಚು ರೂಪಿಸಿದ್ದಾರೆ ಎಂದು ಮಧ್ಯಪ್ರದೇಶ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ರಾಮೇಶ್ವರ್ ಶರ್ಮಾ ತಿಳಿಸಿದ್ದಾರೆ.

ಲವ್ ಜಿಹಾದ್‌ಗೆ ಸಂಬಂಧಿಸಿದ ಕಾಯ್ದೆಯ ವಿಚಾರವಾಗಿ ಎಎನ್ಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿರುವ ಅವರು, 'ಸೀತೆಯನ್ನು ರುಬಿಯಾಳನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಐಎಸ್‌ಐ ಏಜೆಂಟರು ಸಂಚು ರೂಪಿಸಿದ್ದಾರೆ. ನಾವು ಎಷ್ಟು ಸಮಯದವರೆಗೆ ಸೀತೆಯನ್ನು ರುಬಿಯಾ ಆಗಲು ಬಿಡಬೇಕು? ನರ್ಗಿಸ್ ಮತ್ತು ಸುನಿಲ್‌ ದತ್ ಅವರಂತಹ ನಿಜವಾದ ಪ್ರೀತಿಯನ್ನು ನನಗೆ ತೋರಿಸಿ. ಎಷ್ಟು ನರ್ಗಿಸ್‌ಗಳು ಸುನಿಲ್ ದತ್‌ರನ್ನು ಮದುವೆಯಾದರು ಹೇಳಿ?' ಎಂದು ಶರ್ಮಾ ಪ್ರಶ್ನಿಸಿದ್ದಾರೆ.

ಲವ್ ಜಿಹಾದ್ ಪ್ರಕರಣಗಳ ಕಡಿವಾಣಕ್ಕೆ ಕಾಯ್ದೆ ರೂಪಿಸಲು ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಉದ್ದೇಶಿತ ಕಾಯ್ದೆಯ ಅನುಸಾರ, ಲವ್‌ ಜಿಹಾದ್‌ ಪ್ರಕರಣಗಳ ಅಪರಾಧವು ಜಾಮೀನುರಹಿತವಾಗಿದ್ದು, ಗರಿಷ್ಠ 5 ವರ್ಷ ಸಜೆ ವಿಧಿಸಲು ಅವಕಾಶ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT