ADVERTISEMENT

ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 19:01 IST
Last Updated 3 ಅಕ್ಟೋಬರ್ 2018, 19:01 IST
   

ನವದೆಹಲಿ: ಅಸ್ಸಾಂನ ಸಿಲ್ಚಾರ್‌ ಜೈಲಿನಲ್ಲಿರುವ ಏಳು ಮಂದಿಯನ್ನು ಭಾರತದಿಂದ ಮ್ಯಾನ್ಮಾರ್‌ಗೆ ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರೊಹಿಂಗ್ಯಾ ನಿರಾಶ್ರಿತರು ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ನಡುವೆ, ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಏಳು ಮಂದಿ ನಿರಾಶ್ರಿತರನ್ನು ಗುರುವಾರ ಮ್ಯಾನ್ಮಾರ್‌ಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2012ರಿಂದ ಮಣಿಪುರ ಗಡಿಯಲ್ಲಿ ನೆಲೆಸಿದ್ದ ಏಳು ಮಂದಿಯನ್ನು ಈಚೆಗೆ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

‘ಮ್ಯಾನ್ಮಾರ್‌ನಲ್ಲಿ ಸದ್ಯ ಕೆಟ್ಟ ಪರಿಸ್ಥಿತಿ ಇದೆ. ದೇಶಕ್ಕೆ ಹಿಂತಿರುಗುವವರನ್ನು ಹಿಂಸಿಸುವ ಇಲ್ಲವೇ ಕೊಲೆ ಮಾಡುವ ಸಾಧ್ಯತೆ ಇದೆ ಎಂದು ನಿರಾಶ್ರಿತ ಮೊಹಮದ್‌ ಸಲೀಮುಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.