ADVERTISEMENT

ಸಿವಿಸಿಗೆ ಸಂಜಯ್ ಮುಖ್ಯ ಆಯುಕ್ತ

ಪಿಟಿಐ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST
ಸಂಜಯ್ ಕೊಠಾರಿ
ಸಂಜಯ್ ಕೊಠಾರಿ   

ನವದೆಹಲಿ: ರಾಷ್ಟ್ರಪತಿ ಅವರ ಕಾರ್ಯದರ್ಶಿ ಸಂಜಯ್ ಕೊಠಾರಿ ಅವರನ್ನು ಕೇಂದ್ರ ಜಾಗೃತ ದಳದ ಮುಖ್ಯ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಉನ್ನತ ಸಮಿತಿಯು ಬುಧವಾರ ಸಭೆ ಸೇರಿ ಬಹುಮತದ ಆಧಾರದ ಮೇಲೆ ಈ ಆಯ್ಕೆ ಮಾಡಿದೆ.ಪ್ರಸ್ತುತ ಮಾಹಿತಿ ಆಯುಕ್ತರಾಗಿರುವ ಬಿಮಲ್ ಜುಲ್ಕಾ ಅವರನ್ನು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಕೇಂದ್ರ ಜಾಗೃತ ದಳದ ಆಯುಕ್ತರನ್ನಾಗಿ ಸುರೇಶ್ ಪಟೇಲ್ ಹಾಗೂ ಮಾಹಿತಿ ಆಯೋಗ ಆಯುಕ್ತರನ್ನಾಗಿ ಅನಿತಾ ಪಾಂಡೋವ್ ಅವರನ್ನು ನೇಮಿಸಲು ಸಮಿತಿ ಒಪ್ಪಿಗೆ ಸೂಚಿಸಿದೆ.

ADVERTISEMENT

ಈ ಆಯ್ಕೆಗೆ ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಅಧಿರ್ ರಂಜನ್ ಚೌಧರಿ ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.