ADVERTISEMENT

PHOTOS | ಕಾಶಿ ದೇಗುಲ ಕಾರಿಡಾರ್‌ ಕಾರ್ಮಿಕರೊಂದಿಗೆ ಭೋಜನ ಸ್ವೀಕರಿಸಿ, ಹೂಮಳೆಗರೆದ ಮೋದಿ 

ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಯೋಜನೆಯಲ್ಲಿ ದುಡಿದ ಕಾರ್ಮಿಕರೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿ, ಅವರಿಗೆ ಹೂಮಳೆಗರೆದು ಪ್ರಧಾನಿ ನರೇಂದ್ರ ಮೋದಿ ಗೌರವ ಸಮರ್ಪಿಸಿದ್ದಾರೆ.ಕಾಶಿ ಕಾರಿಡಾರ್‌ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮೋದಿ ಸೋಮವಾರ ಎರಡು ದಿನಗಳ ವಾರಾಣಸಿ ಪ್ರವಾಸ ಕೈಗೊಂಡಿದ್ದಾರೆ.ಸೋಮವಾರ ಬೆಳಗ್ಗೆ ಅವರು ಕಾಶಿ ಕಾರಿಡಾರ್‌ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದರು.ನಂತರ ಕಾರಿಡಾರ್‌ನಾದ್ಯಂತ ಸಂಚರಿಸಿದ ನರೇಂದ್ರ ಮೋದಿ ಅವರು, ಯೋಜನೆಯ ಕಾರ್ಮಿಕರೊಂದಿಗೆ ಕುಳಿತು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಭೋಜನ ಸೇವಿಸುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಮೋದಿ ಅವರೊಂದಿಗೆ ಇದ್ದರು. ‌ನಂತರ ಕಾರ್ಮಿಕರಿಗೆ ಹೂಮಳೆಗರೆದ ಮೋದಿ, ಅವರಿಗೆ ಗೌರವ ಸಮರ್ಪಣೆ ಮಾಡಿದರು.ಮೋದಿ ಅವರ ವಾರಾಣಸಿ ಕಾರ್ಯಕ್ರಮ ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 13:37 IST
Last Updated 13 ಡಿಸೆಂಬರ್ 2021, 13:37 IST
ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಯೋಜನೆಯಲ್ಲಿ ದುಡಿದ ಕಾರ್ಮಿಕರೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ. (ಐಎಎನ್‌ಎಸ್‌)
ಕಾಶಿ ವಿಶ್ವನಾಥ ಧಾಮ ಕಾರಿಡಾರ್‌ ಯೋಜನೆಯಲ್ಲಿ ದುಡಿದ ಕಾರ್ಮಿಕರೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ. (ಐಎಎನ್‌ಎಸ್‌)   
ಭೋಜನ ಸೇವಿಸುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಮೋದಿ ಅವರೊಂದಿಗೆ ಇದ್ದರು. ‌(ಐಎಎನ್‌ಎಸ್‌)
ಕಾಶಿ ಕಾರಿಡಾರ್‌ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮೋದಿ ಸೋಮವಾರ ಎರಡು ದಿನಗಳ ವಾರಾಣಸಿ ಪ್ರವಾಸ ಕೈಗೊಂಡಿದ್ದಾರೆ. (ಐಎಎನ್‌ಎಸ್‌)
ಕಾರ್ಮಿಕರೊಂದಿಗೆ ಭೋಜನ ಸವಿಯುತ್ತಿರುವ ಪ್ರಧಾನಿ (ಐಎಎನ್‌ಎಸ್‌)
ಕಾರ್ಮಿಕರಿಗೆ ಹೂಮಳೆಗರೆದ ಮೋದಿ, ಅವರಿಗೆ ಗೌರವ ಸಮರ್ಪಣೆ ಮಾಡಿದರು. (ಐಎಎನ್‌ಎಸ್‌)
ಮೋದಿ ಅವರ ವಾರಾಣಸಿ ಕಾರ್ಯಕ್ರಮ ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. (ಐಎಎನ್‌ಎಸ್‌)
ಕಾರ್ಮಿಕರೊಂದಿಗೆ ಮೋದಿ ಕುಷಲೋಪರಿ (ಐಎಎನ್‌ಎಸ್‌)
ಕಾಶಿ ದೇಗುಲ ಕಾರಿಡಾರ್‌ ಕಾರ್ಮಿಕರ ಜೊತೆಗೆ ಮೋದಿ ಸಂಭ್ರಮದ ಕ್ಷಣ (ಐಎಎನ್‌ಎಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.