ADVERTISEMENT

ಯಡಿಯೂರಪ್ಪ ಭಾಷಣ ಪಕ್ಷದ ನೈತಿಕತೆಯ ಪ್ರತಿಬಿಂಬ : ಪ್ರಧಾನಿ ಮೋದಿ ಶ್ಲಾಘನೆ

ಯಡಿಯೂರಪ್ಪ ವಿದಾಯ ಭಾಷಣ: ಪ್ರಧಾನಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 13:40 IST
Last Updated 24 ಫೆಬ್ರುವರಿ 2023, 13:40 IST
   

ನವದೆಹಲಿ: ಕರ್ನಾಟಕ ವಿಧಾನಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಶುಕ್ರವಾರ ಮಾಡಿದ ವಿದಾಯ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಯಡಿಯೂರಪ್ಪ ಅವರ ಭಾಷಣವು ಪಕ್ಷದ ನೈತಿಕತೆಯನ್ನು ಪ್ರತಿಬಿಂಬಿಸಿದೆ ಎಂದಿದ್ದಾರೆ.

ಕರ್ನಾಟಕ ಬಿಜೆಪಿಯು ಟ್ವೀಟ್‌ ಮಾಡಿದ್ದ ಯಡಿಯೂರಪ್ಪ ಅವರ ಭಾಷಣವನ್ನು ಮರು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ‘ಬಿಜೆಪಿಯ ಒಬ್ಬ ಕಾರ್ಯಕರ್ತನಾಗಿ ನನಗೆ ಈ ಭಾಷಣವು ಸ್ಪೂರ್ತಿದಾಯಕ ಎನಿಸಿದೆ. ಇದು ನಮ್ಮ ಪಕ್ಷದ ನೈತಿಕತೆಯನ್ನು ಬಿಂಬಿಸಿದೆ. ಜೊತೆಗೆ, ಈ ಭಾಷಣವು ಬೇರೆ ಪಕ್ಷದ ಕಾರ್ಯಕರ್ತರಿಗೂ ಸ್ಪೂರ್ತಿದಾಯಕವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT