ADVERTISEMENT

ಸ್ವಾತಂತ್ರ್ಯ ದಿನವನ್ನು ಅವಮಾನಿಸಿದ ಪ್ರಧಾನಿ: ಪಿಣರಾಯಿ ವಿಜಯನ್‌

ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಶಂಸಿಸಿದ ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 16 ಆಗಸ್ಟ್ 2025, 15:27 IST
Last Updated 16 ಆಗಸ್ಟ್ 2025, 15:27 IST
<div class="paragraphs"><p>ಪಿಣರಾಯಿ ವಿಜಯನ್–ಪಿಟಿಐ ಚಿತ್ರ</p></div>

ಪಿಣರಾಯಿ ವಿಜಯನ್–ಪಿಟಿಐ ಚಿತ್ರ

   

ತಿರುವನಂತಪುರ: ‘ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆರ್‌ಎಸ್‌ಎಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಭವೀಕರಿಸಿರುವುದು ಆ ದಿನವನ್ನೇ ಅವಮಾನಿಸಿದಂತಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ.

‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾದ ಬಲಪಂಥೀಯ ಸಂಘಟನೆ ಆರ್‌ಎಸ್‌ಎಸ್‌ ಅನ್ನು ಪ್ರಧಾನಿ ಮೋದಿ ಅವರು ಹೊಗಳಿರುವುದು ಸ್ವಾತಂತ್ರ್ಯ ಪಿತೃತ್ವವನ್ನು ಆ ಸಂಘಟನೆಗೆ ನೀಡಿದಂತಾಗಿದೆ’ ಎಂದು ವಿಜಯನ್‌ ಅವರು ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಮೋದಿ ಅವರ ನಡೆಯು ‘ಇತಿಹಾಸವನ್ನು ತಿರಸ್ಕರಿಸುವ’ ಹೆಜ್ಜೆಯಾಗಿದೆ. ಆರ್‌ಎಸ್‌ಎಸ್‌ ಹೊಂದಿರುವ ವಿಭಜಕ ರಾಜಕೀಯದ ವಿಷಪೂರಿತ ಇತಿಹಾಸವನ್ನು ಇಂತಹ ನಡೆಗಳಿಂದ ಮರೆಮಾಚಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.