ADVERTISEMENT

ಬೆಂಗಳೂರು ವೈದ್ಯರಿಂದ ಹೋಮಿಯೊಪಥಿ ಚಿಕಿತ್ಸೆ: ಬ್ರಿಟನ್‌ ರಾಜಕುಮಾರ ಗುಣಮುಖ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 1:47 IST
Last Updated 3 ಏಪ್ರಿಲ್ 2020, 1:47 IST
ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌
ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌   
""

ಪಣಜಿ: ಆಯುರ್ವೇದ ಮತ್ತು ಹೋಮಿಯೊಪತಿ ಚಿಕಿತ್ಸಾ ವಿಧಾನದ ಮೂಲಕ ಬೆಂಗಳೂರು ಮೂಲದ ವೈದ್ಯರು, ಕೋವಿಡ್‌ ಪೀಡಿತರಾಗಿದ್ದ ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌ ಅವರನ್ನು ಗುಣಪಡಿಸಿದ್ದಾರೆ ಎಂದು ಕೇಂದ್ರ ಆಯುಷ್‌ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ್‌ ಹೇಳಿದ್ದಾರೆ.

‘ಆಯುರ್ವೇದ ಮತ್ತು ಹೋಮಿಯೊಪಥಿ ಔಷಧಗಳ ಮೂಲಕ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ. ಚಾರ್ಲ್ಸ್ ಗುಣಮುಖರಾಗಿದ್ದಾರೆ’ ಎಂದು ಬೆಂಗಳೂರಿನಲ್ಲಿ ‘ಸೌಖ್ಯ’ ಆರೋಗ್ಯ ಕೇಂದ್ರ ನಡೆಸುತ್ತಿರುವ ಡಾ. ಮಥಾಯಿ ಅವರು ಕರೆ ಮಾಡಿ ತಿಳಿಸಿದ್ದಾರೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT