ADVERTISEMENT

ಅಮಾನತಾಗಿರುವ ರಾಜ್ಯಸಭಾ ಸಂಸದರಿಗೆ ಜನ ಈಗಾಗಲೇ ಪಾಠ ಕಲಿಸಿದ್ದಾರೆ: ಪ್ರಲ್ಹಾದ ಜೋಶಿ

ಪಿಟಿಐ
Published 14 ಡಿಸೆಂಬರ್ 2021, 12:51 IST
Last Updated 14 ಡಿಸೆಂಬರ್ 2021, 12:51 IST
ಪ್ರಲ್ಹಾದ ಜೋಶಿ – ಪ್ರಜಾವಾಣಿ ಸಂಗ್ರಹ ಚಿತ್ರ
ಪ್ರಲ್ಹಾದ ಜೋಶಿ – ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ಅಮಾನತುಗೊಂಡಿರುವ ರಾಜ್ಯಸಭೆಯ ಸಂಸದರಿಗೆ ದೇಶದ ಜನ ಈ ಹಿಂದೆಯೇ ಪಾಠ ಕಲಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಎರಡು ಲೋಕಸಭೆ ಚುನಾವಣೆಗಳ ಸೋಲನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

12 ಸಂಸದರ ಅಮಾನತು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದರ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಅಮಾನತಾಗಿರುವ ಸಂಸದರು ಕ್ಷಮೆಯಾಚಿಸಿ ಸದನಕ್ಕೆ ಬರಲಿ. ಸರ್ಕಾರವು ಅವರ ಟೀಕೆ ಹಾಗೂ ಸಲಹೆಗಳನ್ನು ಕೇಳಲು ಸಿದ್ಧವಿದೆ ಎಂದು ಜೋಶಿ ಹೇಳಿದ್ದಾರೆ.

ADVERTISEMENT

ಪ್ರತಿಪಕ್ಷಗಳು ಕೆಲವೊಮ್ಮೆ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳುತ್ತವೆ. ಮತ್ತೆ ಕೆಲವೊಮ್ಮೆ ಕಲಾಪಕ್ಕೆ ಅಡ್ಡಿಪಡಿಸುತ್ತವೆ. ನಿಜವಾಗಿ ಪ್ರತಿಪಕ್ಷಗಳ ಕಾರ್ಯತಂತ್ರ ಏನು ಎಂದು ಜೋಶಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.